CrimeNational

ಪ್ರಿಯಕರನ್ನು ಕಬ್ಬಿನ ಗದ್ದೆಯಲ್ಲಿ ಕೊಂದು ಮುಗಿಸಿದ ಇಬ್ಬರು ಪ್ರೇಯಸಿಯರು!

ನೊಯ್ಡಾ(Noida); ತನ್ನ ಪ್ರಿಯಕರನನ್ನು ಕಬ್ಬಿನ ಗದ್ದೆಗೆ ಕರೆಸಿಕೊಂಡ ಇಬ್ಬರು ಪ್ರೇಯಸಿಯರು, ಆತನನ್ನು ಅಲ್ಲೇ ಕೊಲೆ ಮಾಡಿದ್ದಾರೆ.. ಉತ್ತರ ಪ್ರದೇಶದ ಅಂಬೇಡ್ಕರ್‌ ನಗರ ಜಿಲ್ಲೆಯ ಸಮ್ಮನಪುರ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.. ಸುಳ್ಳು ಹೇಳಿ ಇಬ್ಬರೂ ಪ್ರೇಯಸಿಯರು ತನ್ನ ಪ್ರಿಯಕರನನ್ನು ಕಬ್ಬಿನ ಗದ್ದೆಗೆ ಕರೆಸಿಕೊಂಡಿದ್ದಾರೆ.. ಇಬ್ಬರ ಜೊತೆಯೂ ಒಟ್ಟಿಗೆ ರೊಮ್ಯಾನ್ಸ್‌ ಮಾಡುವ ಆಸೆ ಹುಟ್ಟಿಸಿ ಕರೆಸಿಕೊಂಡು ಕೊಲೆ ಮಾಡಿದ್ದಾರೆ..
ಮೂರು ದಿನಗಳ ಹಿಂದೆ ಕಬ್ಬಿನ ಗದ್ದೆಯೊಂದರಲ್ಲಿ ಅರೆಬೆತ್ತಲೆಯಾಗಿ ಬಿದ್ದಿದ್ದ ಅಪರಿಚಿತ ಯುವಕನ ಶವ ಸಿಕ್ಕಿತ್ತು.. ಇದರ ವಿಚಾರಣೆ ಶುರು ಮಾಡಿದ ಪೊಲೀಸರಿಗೆ ಈ ವಿಚಾರ ಗೊತ್ತಾಗಿದೆ.. ಇಬ್ಬರೂ ಯುವತಿಯರು ಚೀನಾ ಟಾರ್ಚ್‌ ಬಳಸಿ ಆತನ ಮೇಲೆ ತೀವ್ರ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.. ಅನುಮಾನದ ಮೇರೆಗೆ ಪೊಲೀಸರು ಈ ಇಬ್ಬರು ಯುವತಿಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ..
ಕೊಲೆಯಾದ ಯುವಕನನ್ನು ಸಂದೀಪ್‌ ಚೌಹಾಣ್‌ ಎಂದು ಗುರುತಿಸಲಾಗಿದೆ.. ಈತ ಕಂಜಾ ಇಸ್ಮಾಯಿಲ್‌ ಪುರ ನಿವಾಸಿಯಾಗಿದ್ದು, ಅದೇ ಗ್ರಾಮದ ಇಬ್ಬರು ಯುವತಿಯರನ್ನು ಲವ್‌ ಮಾಡುತ್ತಿದ್ದ.. ಇಬ್ಬರಿಗೂ ಗೊತ್ತಾಗದಂತೆ ಯಾಮಾರಿಸಿ ಇಬ್ಬರನ್ನೂ ಮೈಂಟೇನ್‌ ಮಾಡುತ್ತಿದ್ದ.. ಕೊನೆಗೆ ಒಂದು ದಿನ ಇಬ್ಬರಿಗೂ ಈ ವಿಚಾರ ಗೊತ್ತಾಗಿದೆ.. ಆಗ ಇಬ್ಬರಿಗೂ ಆತ ಬ್ಲ್ಯಾಕ್‌ಮೇಲ್‌ ಮಾಡಲು ಶುರು ಮಾಡಿದ್ದ.. ಇದ್ರಿಂದ ಇಬ್ಬರೂ ಒಂದಾದ ಯುವತಿಯರು ಪ್ಲ್ಯಾನ್‌ ಮಾಡಿ ಸಂದೀಪ್‌ನನ್ನು ಕಬ್ಬಿನ ಗದ್ದೆಗೆ ಕರೆಸುಕೊಂಡು ಕೊಲೆ ಮಾಡಿದ್ದಾರೆ..

 

Share Post