CrimeNational

ಸರ್ಕಾರಿ ಬಸ್‌ ರೂಪದಲ್ಲಿ ಬಂದ ಜವರಾಯ: ಒಂದೇ ಕುಟುಂಬದ ನಾಲ್ವರು ಸಾವು

ತೆಲಂಗಾಣ: ದೇವರ ಜಾತ್ರೆಗೆ ಹೋಗಿ ದರ್ಶನ ಪಡೆದು ಸಂತೋಷದಿಂದ ಹಿಂದಿರುಗುತ್ತಿದ್ದ ಕುಟುಂಬವೊಂದು ಅಪಘಾತಕ್ಕೆ ಸಿಲುಕಿದೆ.  ಮೇಡಾರಂ ಜಾತ್ರೆಗೆ ಹೋಗಿ ಬರುವಾಗ ಮಾರ್ಗ ಮಧ್ಯೆ ಸರ್ಕಾರಿ ಬಸ್‌ ರೂಪದಲ್ಲಿ ಬಂದು ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಕಾರಿಗೆ ಡಿಕ್ಕಿ ಹೊಡೆದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ದುರಂತ ಘಟನೆ ಮುಲುಗು ಜಿಲ್ಲೆಯ ಗಟ್ಟಮ್ಮ ಗುಡಿ ಬಳಿ ನಡೆದಿದೆ.

ರಸ್ತೆ ಮಧ್ಯೆ ಗಟ್ಟಮ್ಮ ಗುಡಿ ಬಳಿ ಆರ್‌ಟಿಸಿ(APSRTC) ಬಸ್ ಕಾರಿಗೆ ಡಿಕ್ಕಿ ಹೊಡೆದ ಕಾರಣ ನಾಲ್ವರು ಸಾವನ್ನಪ್ಪಿದ್ದಾರೆ. ಇತರ ಮೂವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಅವರ ಸ್ಥಿತಿಯೂ ಕೂಡ ವಿಷಮವಾಗಿದೆ ಎಂದಬ ಮಾಹಿತಿಯಿದೆ.

ಮೃತರು ವಾಜೇಡು ಮಂಡಲ ಚಂದುಪಟ್ಲ ಗ್ರಾಮದವರು ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ವಾಜೇಡು(Vajedu) ಕಡೆಯಿಂದ ಹನ್ಮಕೊಂಡಕ್ಕೆ(Hanumakonda) ತೆರಳುತ್ತಿದ್ದಾಗ ಈ ದುರಂತ ಘಟನೆ ನಡೆದಿದೆ.

Share Post