CrimeDistricts

ಮಂಡ್ಯದಲ್ಲಿ ನಿವೃತ್ತ ಯೋಧನನ್ನು ಬಲಿ ತೆಗೆದುಕೊಂಡ ರಸ್ತೆ ಗುಂಡಿ

ಮಂಡ್ಯ; ಬೆಂಗಳೂರಿನಲ್ಲಿ ರಸ್ತೆಗುಂಡಿಗಳಿಂದಾಗಿ ಒಂದಿಲ್ಲೊಂದು ಅನಾಹುತಗಳು ನಡೆಯುತ್ತಿರೋದು ಗೊತ್ತೇ ಇದೆ. ಇದೀಗ ಇಂತಹ ಅನಾಹುತಗಳು ಜಿಲ್ಲಾ ಕೇಂದ್ರಗಳಿಗೂ ಕಾಲಿಟ್ಟಿವೆ. ಮಂಡ್ಯ ನಗರದಲ್ಲಿ ರಸ್ತೆಗುಂಡಿಯಿಂದಾಗಿ ನಿವೃತ್ತ ಯೋಧರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಮಂಡ್ಯದ ಕಾರೆಮನೆ ಗೇಟ್‌ ಬಳಿ ಈ ಘಟನೆ ನಡೆದಿದೆ.

ಬೈಕ್‌ನಲ್ಲಿ ಸಾತನೂರಿನಿಂದ ಮಂಡ್ಯಕ್ಕೆ ಆಗಮಿಸುತ್ತಿದ್ದಾಗ ಕಾರೆಮನೆ ಗೇಟ್‌ ಬಳಿ ಗುಂಡಿ ತಪ್ಪಿಸಲು ಹೋದಾಗ ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದು ಬೈಕ್‌ ಕೆಳಗೆ ಬಿದ್ದಿದೆ. ಈ ವೇಳೆ ಹಿಂದಿನಿಂದ ಬಂದ ಲಾರಿ ಬೈಕ್‌ ಸವಾರನ ಮೇಲೆ ಹತ್ತಿದೆ. ಘಟನೆಯಲ್ಲಿ ನಿವೃತ್ತ ಯೋಧ ಎಸ್‌.ಎನ್‌.ಕುಮಾರ್‌ ಸಾವನ್ನಪ್ಪಿದ್ದಾರೆ. ಕುಮಾರ್‌ ಅವರು ಇತ್ತೀಚೆಗೆ ಸೇನೆಯಿಂದ ನಿವೃತ್ತರಾಗಿ ಇತ್ತೀಚೆಗೆ ಪೊಲೀಸ್ ಪೇದೆಯಾಗಿ ತರಬೇತಿಗೆ ಹೋಗುತ್ತಿದ್ದರು.

Share Post