BengaluruCrime

ಪ್ರಭುಧ್ಯಾ ಆತ್ಮಹತ್ಯೆ ಮಾಡಿಕೊಂಡಿಲ್ಲ; 15 ವರ್ಷದ ಬಾಲಕ ಕೊಲೆ ಮಾಡಿದನಾ?

ಬೆಂಗಳೂರು; ಬೆಂಗಳೂರಿನ ಸುಬ್ರಹ್ಮಣ್ಯಪುರದಲ್ಲಿ ಪ್ರಭುದ್ಯಾ ಎಂಬ ಯುವತಿ ಅನುಮಾನಾಸ್ಪದವಾಗಿ ಸಾವಪ್ಪಿದ್ದಳು.. ಕತ್ತು ಕುಯ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.. ಈ ಹಿಂದೆ ಪ್ರಭುದ್ಯಾ ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು.. ಜೊತೆಗೆ ಮೃತದೇಹದ ಬಳಿ ಡೆತ್ ನೋಟ್ ಸಿಕ್ಕಿತ್ತು.. ಹೀಗಾಗಿ, ಆತ್ಮಹತ್ಯೆ ಎಂದೇ ಎಲ್ಲರೂ ಭಾವಿಸಿದ್ದರು.. ಆದ್ರೆ ಇದೀಗ ಇದು ಆತ್ಮಹತ್ಯೆ ಅಲ್ಲ, ಕೊಲೆ ಅನ್ನೋದು ಸಾಬೀತಾಗಿದೆ..

  ಘಟನೆ ಸಂಬಂಧ ಅಪ್ರಾಪ್ತ ಬಾಲಕನನ್ನು ಸುಬ್ರಹ್ಮಣ್ಯಪುರ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ..

   ಆತ್ಮಹತ್ಯೆ ಇರಬಹುದು ಎಂದುಕೊಂಡಿದ್ದರೂ ಪ್ರಬುಧ್ಯಾ ತಾಯಿ ಇದು ಕೊಲೆ ಎಂಬ ಅನುಮಾನ ವ್ಯಕ್ತಪಡಿಸಿ ಕೇಸ್ ದಾಖಲಿಸಿದ್ದರು.. ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಸ್ವಭಾವದವಳಲ್ಲ, ಅದಕ್ಕೆ ಯಾವುದೇ ಕಾರಣ ಇಲ್ಲ. ನನ್ನ ಮಗಳನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.

  15 ವರ್ಷದ ಬಾಲಕ ಪ್ರಭುಧ್ಯಾ ಅವರ ಮನೆಯಲ್ಲಿ 2 ಸಾವಿರ ರೂಪಾಯಿ ಕಳ್ಳತನ ಮಾಡಿದ್ದ. ಇದನ್ನು ಪ್ರಭುಧ್ಯಾ ನೋಡಿದ್ದಳು. ನಿನ್ನ ಪೋಷಕರಿಗೆ ಹೇಳೋದಾಗಿ ಬಾಲಕನಿಗೆ ಹೆದರಿಸಿದ್ದಳು. ಎಲ್ಲಿ ಅಪ್ಪ-ಅಮ್ಮನಿಗೆ ಹೇಳುತ್ತಾಳೋ ಎನ್ನುವ ಭಯದಲ್ಲಿ ಬಾಲಕ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.ಮ

 

Share Post