CrimeNational

ಆಕಸ್ಮಿಕ ಬೆಂಕಿಗೆ ಸುಟ್ಟು ಭಸ್ಮವಾಯಿತು 700 ಮಳಿಗೆಗಳು..!

ಇಟಾನಗರ; ಆಕಸ್ಮಿಕ ಬೆಂಕಿಗೆ 700ಕ್ಕೂ ಹೆಚ್ಚು ಮಳಿಗೆಗಳು ಸುಟ್ಟು ಭಸ್ಮವಾಗಿರುವ ಘಟನೆ ಅರುಣಾಚಲ ಪ್ರದೇಶದ ನಹರ್ಲಗುನ್‌ ಎಂಬಲ್ಲಿ ನಡೆದಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ಆದ್ರೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಎಲ್ಲಾ ಮಳಿಗೆಗಳಿಗೆ ವ್ಯಾಪಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬರುವಷ್ಟರಲ್ಲಿ 700ಕ್ಕೂ ಹೆಚ್ಚು ಮಳಿಗೆಗಳು ಸುಟ್ಟು ಭಸ್ಮವಾಗಿವೆ.

ಮೊದಲು ಕೇವಲ ಎರಡು ಮಳಿಗೆಗಳಿಗೆ ಮಾತ್ರ ಬೆಂಕಿ ಆವರಿಸಿತ್ತು. ಎರಡು ಗಂಟೆಗಳವರೆಗೆ ಎರಡು ಮಳಿಗೆಗಳಲ್ಲಿ ಮಾತ್ರ ಬೆಂಕಿ ಇತ್ತು. ಅಷ್ಟರಲ್ಲಿ ಅಗ್ನಿಶಾಮಕ ಸಿಬ್ಬಂದಿ ಬಂದು ಕಾರ್ಯಾಚರಣೆ ನಡೆಸಿದ್ದರೆ ಉಳಿದ ಮಳಿಗೆಗಳನ್ನು ಉಳಿಸಬಹುದಿತ್ತು. ಆದ್ರೆ ಬೆಂಕಿ ನಿಯಂತ್ರಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ವಿಫಲವಾದರು. ಈ ಕಾರಣದಿಂದಾಗಿ ಬೆಂಕಿ ಇತರ ಮಳಿಗೆಗಳಿಗೂ ವಾಪಿಸಿ ದುರಂತಕ್ಕೆ ಕಾರಣವಾಗಿದೆ. ಅದೃಷ್ಟವಶಾತ್‌ ದುರಂತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Share Post