CrimeDistricts

ರಾಡ್ ನಿಂದ ಹೊಡೆದು ಪತ್ನಿಯ ಬರ್ಬರ ಹತ್ಯೆ

ಕನಕಪುರ; ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ಪಾಪಿ ಪತಿಯೊಬ್ಬ ತನ್ನ ಪತ್ನಿಯನ್ನು ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾನೆ.. ಕನನಕಪುರದ ಚಿಕ್ಕಮುದುವಾಡಿ ಸಂತೆ ಗೇಟ್ ನಲ್ಲಿ ಈ ಕೃತ್ಯ ಎಸಗಲಾಗಿದೆ..

  ಹಾರೋಹಳ್ಳಿ ಬಳಿಯ ಪಿಚ್ಚನಕೆರೆಯ ಮಂಜುಳಾ ಸಾವನ್ನಪ್ಪಿದ ಮಹಿಳೆ.. 13 ವರ್ಷಗಳ ಹಿಂದೆ ರಾಮನಗರ ತಾಲ್ಲೂಕು ವಡ್ಡರಹಳ್ಳಿ ಗ್ರಾಮದ ರಾಜೇಶ್ ನನ್ನು ಈಕೆ ಮದುವೆಯಾಗಿದ್ದಳು.. ಇವರಿಗೆ 12 ವರ್ಷದ ಮಗಳು ಕೂಡಾ ಇದ್ದಾಳೆ.. ಆದ್ರೆ ದಂಪತಿಗಳ ನಡುವೆ ಆಗಾಗ ಜಗಳವಾಗುತ್ತಿತ್ತು. ಹೀಗಾಗಿ ಮಂಜುಳಾ ಎರಡು ವರ್ಷದ ಹಿಂದೆ ಗಂಡನನ್ನು ತೊರೆದು ತವರು ಸೇರಿದ್ದಳು..

 ಭಾನುವಾರ ಬಸ್ ಗಾಗಿ ಕಾಯುತ್ತಿದ್ದ ಮಂಜುಳಾಳನ್ನು ನೋಡಿದ ಪತಿ ಜಗಳ ತೆಗೆದು ಕೊಲೆ ಮಾಡಿದ್ದಾನೆ..

 

Share Post