Crime

Karnataka Bandh; ಕಾವೇರಿ ಉಗಮ ಸ್ಥಳ ಕೊಡಗಿನಲ್ಲೇ ಬಂದ್‌ ಇಲ್ಲ!

ಮಡಿಕೇರಿ; ಕಾವೇರಿ ಉಗಮ ಸ್ಥಳದಲ್ಲಿ ಕೊಡಗಿನಲ್ಲೇ ಬಂದ್‌ಗೆ ಬೆಂಬಲ ವ್ಯಕ್ತವಾಗಿಲ್ಲ. ಕೊಡಗು ಜಿಲ್ಲೆಯ ಮಡಿಕೇರಿ ಸೇರಿ ಬಹುತೇಕ ಎಲ್ಲಾ ಕಡೆ ಜನಜೀವನ ಎಂದಿನಂತೆ ಇದೆ. ವಾಹನ ಓಡಾಟ, ವ್ಯಾಪಾರ ವಹಿವಾಟುಗಳು ಎಂದಿನಂತೆ ನಡೆಯುತ್ತಿವೆ.

ಬಸ್‌ ಸಂಚಾರ, ಆಟೋ ಸಂಚಾರ ಎಂದಿನಂತೆಯೇ ಇದೆ. ಶಾಲಾ-ಕಾಲೇಜುಗಳು ಕೂಡಾ ನಡೆಯುತ್ತಿವೆ. ರೈತರು ಹಾಗೂ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ. ಅಷ್ಟು ಬಿಟ್ಟರೆ ಜನಜೀವನ ಎಂದಿನಂತೆಯೇ ಇದೆ.

ಕೆಲವು ಕಡೆ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್‌ ಭದ್ರತೆ ಏರ್ಪಡಿಸಲಾಗಿದೆ.

 

Share Post