CrimePolitics

ಅಕ್ರಮ ಬಯಲು ಮಾಡಿದ್ದೇ ತಪ್ಪಾಯ್ತು; ಯುವಕನಿಗೆ ನಡು ರಸ್ತೆಯಲ್ಲಿ ಚಪ್ಪಲಿ ಏಟು

ಆಂಧ್ರಪ್ರದೇಶ; ಅಕ್ರಮಗಳನ್ನು ಬಯಲಿಗೆ ತಂದಿದ್ದಕ್ಕೆ ಯುವಕನೊಬ್ಬನ ಮೇಲೆ ದಾಳಿ ಮಾಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಬನಗಾನಪಲ್ಲಿ ಕ್ಷೇತ್ರದಲ್ಲಿ ಟಿಡಿಪಿ ಪಕ್ಷಕ್ಕೆ ಸೇರಿದ ವಿಜಯ್‌ ಕುಮಾರ್‌ ಎಂಬ ಯುವಕ ವೈಎಸ್‌ಆರ್‌ಸಿಪಿ ಮುಖಂಡ ನಾಗೇಶ್ವರ ರಾವ್ ಅವರ ಅಕ್ರಮ ಮತ್ತು ಭೂಕಬಳಿಕೆಯನ್ನು ಬಯಲಿಗೆ ತಂದಿದ್ದ.

ಅಕ್ರಮಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಬೆಳಕಿಗೆ ತಂದಿದ್ದಲ್ಲದೆ, ಪ್ರಕರಣ ಕೂಡಾ ದಾಖಲು ಮಾಡಿದ್ದ. ಇದರಿಂದ ರೊಚ್ಚಿಗೆದ್ದ ನಾಗೇಶ್ವರರಾವ್‌ ಬೆಂಬಲಿಗರು, ವಿಜಯ್‌ಕುಮಾರ್‌ ಮೇಲೆ ಹಲ್ಲೆ ಮಾಡಿದ್ದಾರೆ.

ನದಿಯ ವಿಜಯ್ ಕುಮಾರ್ ಅವರನ್ನು ಮನೆಯಿಂದ ಎಳೆದೊಯ್ದು ರಸ್ತೆಯಲ್ಲಿ ಚಪ್ಪಲಿಯಿಂದ ಹೊಡೆದಿದ್ದಾರೆ. ನಂತರ ಪೊಲೀಸ್ ಠಾಣೆಗೆ ಕರೆದೊಯ್ದ ನಂತರ ಪ್ರಕರಣ ದಾಖಲಿಸಲಾಗಿದೆ. ಆ ವೇಳೆ ತೆಗೆದ ವಿಡಿಯೋ ವೈರಲ್ ಆಗಿದೆ.

Share Post