BengaluruCrime

ಕೆಲಸ ಸಿಗದ ಕಾರಣ ಜೈಲಿಗೆ ಹೋಗಲೆಂದೇ ಚಾಕುವಿನಿಂದ ಚುಚ್ಚಿದ!

ಬೆಂಗಳೂರು; ಕೆಲಸ ಸಿಗದ ಕಾರಣ ಜೈಲಿಗೆ ಹೋಗಲೆಂದೇ ಯುವಕನೊಬ್ಬ ವಿನಾಕಾರಣ ಬಿಎಂಟಿಸಿ ಬಸ್ ಕಂಡಕ್ಟರ್ ಗೆ ಚಾಕುವಿನಿಂದ ಇರಿದಿದ್ದಾನೆ.. ಬೆಂಗಳೂರಿನ ವೈಟ್​ಫೀಲ್ಡ್ ಬಳಿಯ ಐಟಿಪಿಎಲ್ ಬಸ್ ನಿಲ್ದಾಣದ ಬಳಿ ನಡೆದಿದೆ..

  ಸೆಪ್ಟೆಂಬರ್ 1ರ ಸಂಜೆ ಬಸ್ ಕಂಡಕ್ಟರ್ ಯೋಗೇಶ್ ಮೇಲೆ ಎರಡು ಮೂರು ಬಾರಿ ಚಾಕುವಿನಿಂದ ಚುಚ್ಚಿದ್ದಾನೆ.. ಡಿಪೋ-13ರ ವೋಲ್ವೋ ಬಸ್​ನಲ್ಲಿ ಈ ಘಟನೆ ನಡೆದಿದೆ… ಆರೋಪಿ ಹುಚ್ಚನಂತೆ ವರ್ತಿಸಿ ಈ ಕೃತ್ಯ ಎಸಗಿದ್ದಾನೆ..

 ವೈಟ್ ಫೀಲ್ಡ್ ಪೋಲಿಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ..  ಎಲ್ಲೂ ಕೆಲಸ ಸಿಗದ ಕಾರಣ ನಿರಾಸೆಯಾಗಿದೆ.. ಹೀಗಾಗಿ ಜೈಲಿಗೆ ಹೋಗಲು ಹೀಗೆ ಮಾಡಿದ್ದಾಗಿ ಆರೋಪಿ ಹೇಳಿಕೊಂಡಿದ್ದಾನೆ..

ಬಿಎಂಟಿಸಿ ಬಸ್ ನಿರ್ವಾಹಕ ಯೋಗೇಶ್ ಗಂಭೀರ ಗಾಯಗೊಂಡಿದ್ದು, ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Share Post