CrimeNational

ರಾಮ್‌ ರಹೀಂ ಜೈಲಿನಿಂದ ಬಿಡುಗಡೆ; ಇದರಲ್ಲಿ ನನ್ನ ಪಾತ್ರವಿಲ್ಲ ಎಂದ ಹರಿಯಾಣ ಸಿಎಂ

ನವದೆಹಲಿ; ಮಹಿಳೆಯರಿಬ್ಬರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಸಂಬಂಧ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌಧಾದ ಗುರ್ಮಿತ್‌ ರಾಮ್‌ ರಹೀಮ್‌ ಸಿಂಗ್‌ಗೆ 40 ದಿನಗಳ ಪೆರೋಲ್‌ ಸಿಕ್ಕಿದ್ದು, ಜೈಲಿಂದ ಬಿಡುಗಡೆಯಾಗಿದ್ದಾರೆ. ರಾಂ ರಹೀಂ ಅವರ ಬಿಡುಗಡೆಯಲ್ಲಿ ನನ್ನ ಪಾತ್ರವಿಲ್ಲ ಎಂದು ಹರಿಯಾಣ ಸಿಎಂ ಮನೋಹರ ಲಾಲ್‌ ಖಟ್ಟರ್‌ ಹೇಳಿದ್ದಾರೆ.

ಗುರ್ಮಿತ್‌ ರಾಮ್‌ ರಹೀಂ ಸಿಂಗ್‌ ಅವರು 2017ರಲ್ಲಿ ತಮ್ಮ ಆಶ್ರಮದ ಇಬ್ಬರು ಭಕ್ತೆಯರ ಮೇಲೆ ಅತ್ಯಾಚಾರ ಎಸಗಿದ್ದರು. ಈ ಸಂಬಂಧ ಅವರಿಗೆ 20 ವರ್ಷ ಜೈಲು ಶಿಕ್ಷೆಯಾಗಿದೆ. ಹರಿಯಾಣದ ರೋಹ್ಟಕ್‌ ಜೈಲಿನಲ್ಲಿ ಅವರು ಶಿಕ್ಷೆ ಅನುಭವಿಸುತ್ತಿದ್ದಾರೆ. ಆದ್ರೆ ಅವರು ಪೆರೋಲ್‌ಗೆ ಅರ್ಜಿ ಸಲ್ಲಿಸಿದ್ದು, ಕೋರ್ಟ್‌ 40 ದಿನಗಳ ಪೆರೋಲ್‌ ಮೇಲೆ ರಹೀಂರನ್ನು ಬಿಡುಗಡೆ ಮಾಡಿದೆ.

ನವೆಂಬರ್‌ 3ರಂದು ಅದಮ್‌ಪುರ್‌ ಉಪಚುನಾವಣೆ ನಡೆಯುತ್ತಿದೆ. ಜೊತೆಗೆ ಶೀಘ್ರದಲ್ಲೇ ಹರಿಯಾಣದಲ್ಲಿ ಪಂಚಾಯಿತಿ ಚುನಾವಣೆಗಳು ಬರಲಿವೆ. ಇಂತಹ ಸಂದರ್ಭದಲ್ಲೇ ರಹೀಂ ಅವರು ಪೆರೋಲ್‌ ಮೇಲೆ ಹೊರಬಂದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

Share Post