CrimeNational

ಮದುವೆ 2 ದಿನ ಇದ್ದಾಗ ವರ ಆತ್ಮಹತ್ಯೆ!; ಕಾರಣವೇ ವಿಚಿತ್ರ!

ನಿಜಾಮಾಬಾದ್‌; ವಿದ್ಯಾಭ್ಯಾಸ ಮುಗಿಸಿದ್ದ ಯುವಕ ಉದ್ಯೋಗಕ್ಕಾಗಿ ಓಡಾಡುತ್ತಿದ್ದ.. ಆದ್ರೆ ಎಷ್ಟು ಹುಡುಕಿದರೂ ಸೂಕ್ತ ಕೆಲಸ ಸಿಕ್ಕಿರಲಿಲ್ಲ.. ಈ ಮಧ್ಯೆ ಪೋಷಕರಿಂದ ಮದುವೆ ಮಾಡಿಕೊಳ್ಳುವಂತೆ ಒತ್ತಡ.. ಬೇಡ ಎಂದರೂ ಪೋಷಕರು ಹುಡುಗಿಯನ್ನು ನೋಡಿ ಮದುವೆ ದಿನಾಂಕ ಖಾಯಂ ಮಾಡಿದ್ದರು.. ಆದ್ರೆ ಯುವಕನಿಗೆ ಮದುವೆಯಾದರೆ ಕೆಲಸವಿಲ್ಲದ ನಾನು ಹೇಗೆ ಸಂಸಾರ ಸಾಗಿಸೋದು… ಹೆಂಡತಿಯನ್ನು ಹೇಗೆ ಸಾಕೋದು ಎಂಬ ಚಿಂತೆ ಕಾಡಿದೆ.. ಇದರಿಂದಾಗಿ ತೀರಾ ತಲೆಕೆಡಿಸಿಕೊಂಡ ಆತ ಮದುವೆಗೂ ಎರಡು ದಿನ ಮುಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. ತೆಲಂಗಾಣದ ನಿಜಾಮಾಬಾದ್‌ನ ಡಿಚ್‌ಪಲ್ಲಿ ಪೊಲೀಸ್‌ ಠಾಣಾ ವ್ಯಾಪ್ತಿಯ ಮಿಟ್ಟಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ..

ಇದನ್ನೂ ಓದಿ; ರಾಜ್ಯದಲ್ಲಿ ಪ್ರಾಸಿಕ್ಯೂಷನ್‌ ಬಿರುಗಾಳಿ; ಬುಧವಾರ ಕಾಂಗ್ರೆಸ್‌ ಶಾಸಕಾಂಗ ಸಭೆ!

ಬಿಟೆಕ್‌ ಮಾಡಿದ್ದ 29 ವರ್ಷದ ಮಾಸಿಪೆಡ್ಡಿ ಪ್ರಶಾಂತ್‌ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ.. ಆತ್ಮಹತ್ಯೆಗೂ ಮುನ್ನ ಪ್ರಶಾಂತ್ ತನ್ನ ಸ್ನೇಹಿತನಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದ ಎಂದು ತಿಳಿದುಬಂದಿದೆ.. ಕೂಡಲೇ ಸ್ನೇಹಿತ ಕುಟುಂಬದವರಿಗೆ ಮಾಹಿತಿ ನೀಡಿದ್ದು, ಕೂಡಲೇ ಅವರು ನಾಡಪಲ್ಲಿ ಉಪನಗರದಲ್ಲಿರುವ ಗಾಯತ್ರಿ ಎನ್‌ಕ್ಲೇವ್‌ಗೆ ಹೋಗಿದ್ದಾರೆ.. ಅದಲ್ಲಿ ಪ್ರಶಾಂತ್‌ ಕೀಟನಾಶಕ ಸೇವಿಸಿ ಪ್ರಜ್ಞಹೀನ ಸ್ಥಿತಿಯಲ್ಲಿದ್ದ.. ಆತನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತು.. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಪ್ರಶಾಂತ್‌ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ; ಬೆಂಗಳೂರಿನಲ್ಲಿ ಯುವತಿ ಮೇಲೆ ಆಟೋ ಚಾಲಕನಿಂದ ಅತ್ಯಾಚಾರ!

Share Post