CrimeNational

ನದಿಯನ್ನೇ ರಸ್ತೆ ಎಂದು ತೋರಿಸಿದ ಜಿಪಿಎಸ್‌; ಇಬ್ಬರು ವೈದ್ಯರು ನೀರುಪಾಲು

ತಿರುವನಂತಪುರಂ; ಜಿಪಿಎಸ್‌, ಗೂಗಲ್‌ ಮ್ಯಾಪ್‌ ನಂಬಿದ ಇಬ್ಬರು ವೈದ್ಯರು ರಸ್ತೆ ಎಂದುಕೊಂಡು ಕಾರನ್ನು ನದಿಗೆ ನುಗ್ಗಿಸಿ, ಜೀವ ಕಳೆದುಕೊಂಡಿರುವ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡೆದಿದೆ.

ಅದ್ವೈತ್‌ ಹಾಗೂ ಅಜ್ಮಲ್‌ ಆಸೀಫ್‌ ಎಂಬ ವೈದ್ಯರೇ ಜೀವ ಕಳೆದುಕೊಂಡವರು. ಮೃತರು ಇನ್ನೂ ಮೂವರೊಂದಿಗೆ ಸೇರಿ ಕೊಚ್ಚಿಗೆ ಶಾಪಿಂಗ್‌ಗೆ ತೆರಳಿದ್ದಾರೆ. ಮೃತರಲ್ಲೊಬ್ಬರಾದ ವೈದ್ಯ ಅದ್ವೈತ್‌ ಹುಟ್ಟುಹಬ್ಬಕ್ಕಾಗಿ ಶಾಪಿಂಗ್‌ ಮಾಡಲು ಹೋಗಿದ್ದರು. ಶಾಪಿಂಗ್‌ ಮುಗಿಸಿ ಕೊಚ್ಚಿಯಿಂದ ಕೊಡುಂಗಲ್ಲೂರಿಗೆ ಹೋಗಬೇಕಿತ್ತು. ಈ ವೇಳೆ ಜೋರು ಮಳೆ ಬರುತ್ತಿತ್ತು. ಜೊತೆ, ಅವರಿಗೆ ಸರಿಯಾಗಿ ದಾರಿ ಪರಿಚಯವಿರಲಿಲ್ಲ.

ಹೀಗಾಗಿ ಮ್ಯಾಪ್‌ ಹಾಕಿಕೊಂಡು ಕಾರು ಚಲಾಯಿಸುತ್ತಿದ್ದರು. ರಸ್ತೆಯಲ್ಲೂ ನೀರು ಹರಿಯುತ್ತಿತ್ತು. ಇದೇ ವೇಳೆ ಜಿಪಿಎಸ್‌ ನದಿಯನ್ನೇ ರಸ್ತೆಯಂತೆ ತೋರಿಸಿದೆ. ಹೀಗಾಗಿ ಕಾರು ಚಾಲಕ ಅದನ್ನು ರಸ್ತೆ ಎಂದೇ ತಿಳಿದು ಕಾರನ್ನು ನದಿಗೆ ನುಗ್ಗಿಸಿದ್ದಾನೆ. ಇದರಿಂದಾಗಿ ಇಬ್ಬರು ಜೀವ ಕಳೆದುಕೊಂಡಿದ್ದಾರೆ. ಉಳಿದ ಮೂವರು ಹೇಗೆ ಜೀವ ಕಾಪಾಡಿಕೊಂಡು ಹೊರಬಂದಿದ್ದಾರೆ.

 

Share Post