CrimeNational

ಶವಯಾತ್ರೆ ವೇಳೆ ಪ್ರವಹಿಸಿದ ವಿದ್ಯುತ್‌; ಪಲ್ಲಕ್ಕಿ ಹೊತ್ತಿದ್ದ ಮೂವರ ದುರ್ಮರಣ

ಚಿತ್ತೂರು; ಸಾವು ಯಾವ ರೂಪದಲ್ಲಿ ಬರುತ್ತದೋ  ಹೇಳುವುದು ತುಂಬಾ ಕಷ್ಟ. ಚೆನ್ನಾಗಿದ್ದವರೂ ಇದ್ದಕ್ಕಿದ್ದಂತೆ ಕುಸಿದುಬಿದ್ದು ಸಾವನ್ನಪ್ಪೋರನ್ನು ನೋಡಿದ್ದೇವೆ. ಆದ್ರೆ ಆಂಧ್ರಪ್ರದೇಶದ ಚಿತ್ತೂರು ಬಳಿ ಇದಕ್ಕಿಂತ ಹೃದಯವಿದ್ರಾವಕ ಘಟನೆ ನಡೆದಿದೆ.  ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಆಕೆಯ ಅಂತಿಮ ಯಾತ್ರೆ ವೇಳೆ, ಮೃತದೇಹ ಹೊತ್ತಿದ್ದವರಿಗೆ ವಿದ್ಯುತ್‌ ತಗುಲಿ ಮೂವರು ಸಾವನ್ನಪ್ಪಿದ್ದಾರೆ.

ಚಿತ್ತೂರು ಜಿಲ್ಲೆ ಕುಪ್ಪಂನಲ್ಲಿ ಈ ದುರ್ಘಟನೆ ನಡೆದಿದೆ. ಇಲ್ಲಿ ಐದನೇ ವಾರ್ಡ್‌ನ ತಂಬಿಗಾನಪಲ್ಲಿಯ ರಾಣಪ್ಪ ಎಂಬುವವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಆಕೆಯ ಮೃತದೇಹವನ್ನು ಕಬ್ಬಿಣದಿಂದ ಮಾಡಿದ ಪಲ್ಲಕ್ಕಿಯಲ್ಲಿ ಅಂತಿಮ ಯಾತ್ರೆ ಮಾಡಲಾಗುತ್ತಿತ್ತು. ಈ ವೇಳೆ ಪಲ್ಲಕ್ಕಿಗೆ ವಿದ್ಯುತ್‌ ತಂತಿ ತಗುಲಿದೆ. ಇದರಿಂದ ಮೃತದೇಹ ಹೊತ್ತವರ ದೇಹದಲ್ಲಿ ವಿದ್ಯುತ್‌ ಪ್ರವಹಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

 

Share Post