CrimeNational

ಟೀ ಬೇಡ ಅಂದಿದ್ದಕ್ಕೆ ಡಿಸಿಗೆ ಮದ್ಯ ಕುಡೀತೀರಾ ಅಂತ ಸಚಿವ; ಪೇಚಿಗೆ ಸಿಲುಕಿದ ಮಹಾ ಮಿನಿಸ್ಟರ್‌

ಬೀಡ್​ (ಮಹಾರಾಷ್ಟ್ರ); ಜಿಲ್ಲಾಧಿಕಾರಿ ಟೀ ಕುಡಿಯಲ್ಲ ಎಂದಿದ್ದಕ್ಕೆ ಮದ್ಯ ಕುಡೀತೀರಾ ಎಂದು ಕೇಳಿ ಮಹಾರಾಷ್ಟ್ರದ ಕೃಷಿ ಸಚಿವ ಪೇಚಿಗೆ ಸಿಲುಕಿದ್ದಾರೆ. ಜಿಲ್ಲಾಧಿಕಾರಿಯನ್ನು ಅಣಕಿಸಲು ಹೋಗಿ ಟೀಕೆಗೆ ಗುರಿಯಾಗಿದ್ದಾರೆ. ಬೀಡ್‌ ಜಿಲ್ಲೆಯ ಜಿಲ್ಲಾಧಿಕಾರಿ ರಾಧಾಬಿನೋದ್‌ ಶರ್ಮಾ ಅವರಿಗೆ ಸಚಿವ ಅಬ್ದುಲ್‌ ಸತ್ತಾರ್‌ ಅವರು ಮದು ಕುಡಿಯುತ್ತೀರಾ ಎಂದು ಕೇಳಿದ್ದಾರೆ. ಟೀ ಬೇಡ ಎಂದಿದ್ದಕ್ಕೆ ಈ ರೀತಿ ಕುಹಕವಾಡಿದ್ದು, ಇದು ಸಾಕಷ್ಟು ಟೀಕೆಗೆ ಗುರಿಯಾಗಿದೆ.

ಬೀಡ್‌ ಜಿಲ್ಲೆಯಲ್ಲಿ ಮಳೆಯಿಂದಾಗಿ ಬೆಳೆಗಳು ಹಾನಿಗೊಳಗಾಗಿವೆ. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲು ಕೃಷಿ ಸಚಿವರು ಆಗಮಿಸಿದ್ದರು. ಗೆವ್ರಾಯಿ ತಾಲ್ಲೂಕಿನಲ್ಲಿ ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಹಾಲ್‌ ಒಂದರಲ್ಲಿ ಕುಳಿತಿದ್ದಾಗ ಟೀ ಕುಡಿಯಲು ಕೊಟ್ಟಿದ್ದು, ಈ ವೇಳೆ ಜಿಲ್ಲಾಧಿಕಾರಿ ಟೀ ಬೇಡ ಎಂದಿದ್ದಾರೆ. ಇದಕ್ಕೆ ಸಚಿವರು ಮದ್ಯದ ಮಾತಾಡಿದ್ದಾರೆ.

Share Post