CrimeSports

ಧೋನಿ ದಾಖಲಿಸಿದ್ದ ನ್ಯಾಯಾಂಗ ನಿಂದನೆ ಕೇಸ್‌; IPS ಅಧಿಕಾರಿಗೆ ಶಿಕ್ಷೆ!

ಚೆನ್ನೈ;  ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್‌ ಮಹೇಂಧರ್‌ ಸಿಂಗ್‌ ಧೋನಿ ದಾಖಲಿಸಿದ್ದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿಯೊಬ್ಬರಿಗೆ ಶಿಕ್ಷೆಯಾಗಿದೆ. ಈ ಕೇಸ್‌ ವಿಚಾರಣೆ ನಡೆಸಿದ ಮದ್ರಾಸ್‌ ಹೈಕೋರ್ಟ್‌, ಐಪಿಎಸ್‌ ಅಧಿಕಾರಿ ಸಂಪತ್‌ಕುಮಾರ್‌ ಅವರಿಗೆ 15 ದಿನಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

2013ರಲ್ಲಿ ಐಪಿಎಲ್‌ ಬೆಟ್ಟಿಂಗ್‌ ಹಗರಣ ಬೆಳಕಿಗೆ ಬಂದಿತ್ತು. ಈ ವೇಳೆ ಐಪಿಎಸ್‌ ಅಧಿಕಾರಿ ಜಿ.ಸಂಪತ್‌ ಕುಮಾರ್‌ ಅವರು ಧೋನಿ ಹೆಸರನ್ನು ಇದರಲ್ಲಿ ಎಳೆದು ತಂದಿದ್ದರು. ಹೀಗಾಗಿ, ಧೋನಿ ಅಧಿಕಾರಿ ಸಂಪತ್‌ ಕುಮಾರ್‌ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದರು. ಈ ಸಂಬಂಧ ಕೋರ್ಟ್‌ ನೀಡಿದ್ದ ತೀರ್ಪಿನ ವಿರುದ್ಧ ಸಂಪತ್‌ ಕುಮಾರ್‌ ಹಲವು ಆರೋಪಗಳನ್ನು ಮಾಡಿದ್ದರು. ಹೀಗಾಗಿ ಧೋನಿಯವರು, ಇದು ನ್ಯಾಯಾಂಗ ನಿಂದನೆ ಎಂದು ಸಂಪತ್‌ಕುಮಾರ್‌ ವಿರುದ್ಧ ಕೇಸ್‌ ದಾಖಲಿಸಿದ್ದರು.

 

Share Post