CrimeNational

ಗುಂಡಿನ ದಾಳಿ ಪ್ರಕರಣ; ಶಾಂತಿ ಕಾಪಾಡಲು ಚಂದ್ರಶೇಖರ್‌ ಆಜಾದ್‌ ಮನವಿ

ಲಕ್ನೋ; ನಿನ್ನೆ ರಾತ್ರಿ ಗುಂಡಿ ದಾಳಿಗೆ ಒಳಗಾಗಿರುವ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಅವರು ಶಾಂತಿ ಕಾಪಾಡುವಂತೆ ನನ್ನ ಸ್ನೇಹಿತರು, ಬೆಂಬಲಿಗರು ಮತ್ತು ದೇಶಾದ್ಯಂತ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ನಾವು ಹೋರಾಟವನ್ನು ಸಾಂವಿಧಾನಿಕವಾಗಿ ಮುಂದುವರೆಸೋಣ ಎಂದೂ ಅವರು ಹೇಳಿದ್ದಾರೆ.

ಇದು ಹಠಾತ್‌ ದಾಳಿ. ಇದನ್ನು ನಾನು ನಿರೀಕ್ಷೆ ಕೂಡಾ ಮಾಡಿರಲಿಲ್ಲ ಎಂದಿರುವ ಚಂದ್ರಶೇಖರ್‌ ಆಜಾದ್‌, ಕೋಟ್ಯಂತರ ಜನರ ಪ್ರೀತಿ ಮತ್ತು ಆಶೀರ್ವಾದದಿಂದ ನಾನು ಚೆನ್ನಾಗಿದ್ದೇನೆ ಎಂದು ಹೇಳಿದ್ದಾರೆ. ನಿನ್ನೆ ಸಂಜೆ ಅವರು ಖಾಸಗಿ ಕಾರ್ಯಕ್ರಮ ಮುಗಿಸಿಕೊಂಡು ಸಹೋದರ ಹಾಗೂ ಇತರೆ ಮೂವರೊಂದಿಗೆ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಉತ್ತರಪ್ರದೇಶದ ಸಹರನ್‍ಪುರ ಜಿಲ್ಲೆಯಲ್ಲಿ ಕಾರಿನಲ್ಲಿ ಬಂದು ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ಒಂದು ಗುಂಡು ಆಜಾದ್‌ ಅವರ ಹೊಟ್ಟೆಯ ಭಾಗಕ್ಕೆ ತಗುಲಿತ್ತು. ದಾಳಿ ನಡೆಸಿದವರು ತಮ್ಮ ಕಾರನ್ನು ರಿವರ್ಸ್‌ನಲ್ಲಿ ತೆಗೆದು ಹೋಗಿ ಪರಾರಿಯಾದರು ಎಂದು ಆಜಾದ್‌ ಹೇಳಿಕೊಂಡಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Share Post