CrimeDistricts

ನಂಬರ್‌ ಬ್ಲಾಕ್‌ ಮಾಡಿದ್ದೇ ಕೊಲೆ ಕಾರಣ; ಮದುವೆಯಾಗಿದ್ದರಂತೆ ಅಂಜಲಿ-ಗಿರೀಶ್‌!

ಹುಬ್ಬಳ್ಳಿ; ಹುಬ್ಬಳ್ಳಿಯಲ್ಲಿ ಯುವತಿಯನ್ನು ದಾರುಣವಾಗಿ ಸಾಯಿಸಿದ್ದ ನರ ರಾಕ್ಷಸ ಕೊನೆಗೂ ಸಿಕ್ಕಿಬಿದ್ದಿದ್ದಾನೆ.. ಆತನ ಬಂಧನದೊಂದಿಗೆ ಹಲವು ಮಹತ್ವದ ವಿಚಾರಗಳು ಬೆಳಕಿಗೆ ಬಂದಿವೆ… ಕೊಲೆಯಾದ ಅಂಜಲಿ ಅಂಬಿಗೇರ ಹಾಗೂ ಕೊಲೆಗಾರ ಗಿರೀಶ್‌ ಸಾವಂತ್‌ ಇಬ್ಬರೂ ಮದುವೆಯಾಗಿದ್ದರು ಅನ್ನೋದು ಮಾಹಿತಿ ಕೂಡಾ ಹೊರಬಿದ್ದಿದೆ.. ಮೈಸೂರಿನ ಬಾರ್‌ ಅಂಡ್‌ ರೆಸ್ಟೋರೆಂಟ್‌ ಒಂದರಲ್ಲಿ ಕೆಲಸ ಮಾಡುವ ಗಿರೀಶ್‌ ಸಾವಂತ್‌ ಹಾಗೂ ಹುಬ್ಬಳ್ಳಿಯ ವೀರಾಪುರ ಓಣಿಯ ಅಂಜಲಿ ಅಂಬಿಗೇರ ಇಬ್ಬರೂ ಪ್ರೀತಿಸುತ್ತಿದ್ದರು.. ಹದಿನೈದು ದಿನಗಳ ಹಿಂದಷ್ಟೇ ದೇವಸ್ಥಾನವೊಂದರಲ್ಲಿ ಇಬ್ಬರೂ ಮದುವೆಯೂ ಆಗಿದ್ದರಂತೆ.. ಅನಂತರ ತವರು ಮನೆಯಲ್ಲಿದ್ದ ಅಂಜಲಿಯನ್ನು ಮೈಸೂರಿನಿಂದ ಬಂದ ಗಿರೀಶ್‌ ಸಾವಂತ್‌, ಆಕೆಯ ಮನೆಯಲ್ಲಿಯೇ ಕೊಲೆ ಮಾಡಿ ಪರಾರಿಯಾಗಿದ್ದ..
ಈ ಕೊಲೆಗೆ ಕಾರಣ ಮದುವೆಯಾದ ಮೇಲೆ ಹಣದ ಕಾರಣಕ್ಕಾಗಿ ಅಂಜಲಿ ಅಂಬಿಗೇರ ಪ್ರಿಯಕರ ಗಿರೀಶ್‌ ಸಾವಂತ್‌ ಮೊಬೈಲ್‌ ನಂಬರ್‌ ಬ್ಲಾಕ್‌ ಮಾಡಿದ್ದು.. ಆರೋಪಿ ಗಿರೀಶ್‌ ಹೇಳುವ ಪ್ರಕಾರ, ವಾರದ ಹಿಂದೆ ಅಂಜಲಿ ಎರಡು ಸಾವಿರ ರೂಪಾಯಿ ಕೇಳಿದ್ದಳಂತೆ.. ಆದ್ರೆ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದ ಗಿರೀಶ್‌ ಒಂದು ಸಾವಿರ ರೂಪಾಯಿ ಮಾತ್ರ ಫೋನ್‌ ಪೇ ಮಾಡಿದ್ದಾನೆ.. ಇದಾದ ನಂತರ ಅಂಜಲಿ ಅಂಬಿಗೇರ ತನ್ನ ಮೊಬೈಲ್‌ನಲ್ಲಿ ಗಿರೀಶ್‌ ಮೊಬೈಲ್‌ ನಂಬರ್‌ ಬ್ಲಾಕ್‌ ಮಾಡಿದ್ದಳಂತೆ.. ಇದರಿಂದ ಆಕ್ರೋಶಗೊಂಡ ಮೈಸೂರಿನಿಂದ ನೇತವಾಗಿ ಮೇ 15 ರಂದು ನಸುಕನ ಜಾವ ಹುಬ್ಬಳ್ಳಿಗೆ ಬಂದಿಳಿದಿದ್ದಾನೆ.. ನೇರವಾಗಿ ಅಂಜಲಿ ಮನೆಗೆ ಹೋಗಿದ್ದಾನೆ.. ಅಲ್ಲಿ ಮಲಗಿದ್ದ ಅಂಜಲಿಯನ್ನು ಕೊಂದು ಪರಾರಿಯಾಗಿದ್ದ..
ಅಲ್ಲಿಂದ ತಪ್ಪಿಸಿಕೊಂಡು ಹಾವೇರಿಗೆ ಹೋಗಿದ್ದ ಆರೋಪಿ, ನಂತರ ರೈಲಿನಲ್ಲಿ ಮೈಸೂರಿಗೆ ಹೋಗಿದ್ದ.. ಅಲ್ಲಿ ಮಹಾರಾಜ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ.. ನಂತರ ಆತನಿಗೆ ಏನನಿಸಿತೋ ಏನು ನೇರವಾಗಿ ಹುಬ್ಬಳ್ಳಿಗೆ ಟ್ರೈನ್‌ ಹತ್ತಿದ್ದಾನೆ.. ಮಾರ್ಗ ಮಧ್ಯೆ ಮಹಿಳಾ ಪ್ರಯಾಣಿಕರೊಬ್ಬರ ಜೊತೆ ಕಿರಿಕ್‌ ಮಾಡಿಕೊಂಡಿದ್ದಾನೆ.. ಈ ವೇಳೆ ಇತರ ಪ್ರಯಾಣಿಕರೆಲ್ಲಾ ಸೇರಿ ಧರ್ಮದೇಟು ನೀಡಿದ್ದಾರೆ.. ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.. ಈ ವೇಳೆ ತಾನೇ ಅಂಜಲಿಯನ್ನು ಕೊಲೆ ಮಾಡಿದವನು ಅಂತ ಗಿರೀಶ್‌ ಬಾಯ್ಬಿಟ್ಟಿದ್ದಾನೆ..

 

Share Post