BengaluruCrime

ಕಾರಿಗೆ ಟಚ್‌ ಮಾಡಿದ್ದಕ್ಕೆ ಗುದ್ದಿಸಿ ಬೈಕ್‌ ಚಾಲಕನ ಕೊಲೆ!

ಬೆಂಗಳೂರು; ಮೊನ್ನೆಯಷ್ಟೇ ಇಂಡಿಕೇಟರ್‌ ಹಾಕಿಲ್ಲ ಅನ್ನೋ ಕಾರಣಕ್ಕೆ ಬೈಕ್‌ ಸವಾರನೊಬ್ಬ ಕಾರಿನ ಮೇಲೆ ಕಲ್ಲು ತೂರಿದ್ದ.. ಇದೀಗ ಆತ ಪೊಲೀಸರ ಅತಿಥಿಯಾಗಿದ್ದಾನೆ.. ಹೀಗಿರುವಾಗಲೇ ಬೆಂಗಳೂರಿನಲ್ಲಿ ಇಂತಹದ್ದೇ ಒಂದು ಪ್ರಕರಣ ನಡೆದಿದ್ದು, ಈ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ..

ಇದನ್ನು ಓದಿ; 163ನೇ ವಿಧಿ ಏನು ಹೇಳುತ್ತೆ..?; ರಾಜ್ಯಪಾಲರಿಗೆ ಸಲಹೆ ನೀಡುವ ಹಕ್ಕು ಸಂಪುಟಕ್ಕಿದೆಯಾ..?

ಕಾರಿಗೆ ಬೈಕ್‌ ಟಚ್‌ ಆದ ಕಾರಣಕ್ಕೆ ಜಗಳ ನಡೆದಿದೆ.. ಈ ವೇಳೆ ಕಾರು ಓಡಿಸುತ್ತಿರುವಾತ ಬೈಕ್‌ ಮೇಲೆ ಕಾರು ಹತ್ತಿಸಿ ಬೈಕ್‌ ಸವಾರನನ್ನು ಕೊಲೆ ಮಾಡಿದ್ದಾನೆ.. ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಈ ಪ್ರಕರಣ ನಡೆದಿದೆ.. ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ ಮಹೇಶ್‌ ಎಂಬಾತನೇ ಕ್ಷುಲ್ಲಕ ಜಗಳಕ್ಕೆ ಕೊಲೆಯಾದ ಯುವಕನಾಗಿದ್ದಾನೆ..

ಇದನ್ನೂ ಓದಿ; ಗಂಡನ ಎರಡನೇ ಮದುವೆಯಲ್ಲಿ ಮೊದಲ ಹೆಂಡತಿಯ ರಂಪಾಟ!

ಗೆಳೆಯರಾದ ಬಾಲಾಜಿ ಹಾಗೂ ನಿಖಿಲ್‌ ಕೊತೆ ಟೀ ಕುಡಿಯಲೆಂದು ಮಹೇಶ್‌ ಹೊರಹೋಗಿದ್ದ.. ಟಿ ಕುಡಿದು ಬೈಕ್‌ನಲ್ಲಿ ವಾಪಸ್ಸಾಗುವಾಗ ಕಾರೊಂದು ಸ್ಪೀಡಾಗಿ ಬಂದಿದೆ.. ಹಾರನ್‌ ಹೊಡೆದರೂ ಸೈಡ್‌ ಕೊಟ್ಟಿಲ್ಲ.. ಇದೇ ವೇಳೆ ಕಾರಿಗೆ ಬೈಕ್‌ ಟಚ್‌ ಆಗಿದೆ ಎನ್ನಲಾಗಿದೆ.. ಇದಾದ ಮೇಲೆ ಕಾರು ಚಾಲಕ ಅರವಿಂದ್‌ ಎಂಬಾತ ಮಹೇಶ್‌ ಬೈಕ್‌ ಅನ್ನು ಚೇಸ್‌ ಮಾಡಿಕೊಂಡು ಹೋಗಿದ್ದಾನೆ.. ಇದೇ ವೇಳೆ ಮುಖ್ಯರಸ್ತೆಯಿಂದ ಅಡ್ಡ ರಸ್ತೆಗೆ ಬೈಕ್‌ ತಿರುಗಿಸುವಾಗ ಬೈಕ್‌ನಲ್ಲಿದ್ದ ಮಹೇಶ್‌ ಹಾಗೂ ಮತ್ತೊಬ್ಬ ಕೆಳಗೆ ಬಿದ್ದಿದ್ದಾರೆ.. ಈ ವೇಳೆ ಹಿಂದಿನಿಂದ ಬಳ ಅರವಿಂದ್‌ ಕಾರು ಮಹೇಶ್‌ಗೆ ಡಿಕ್ಕಿ ಹೊಡೆದಿದೆ.. ಇದರಿಂದ ಪಕ್ಕದ ಮನೆಯ ಕಾಂಪೌಂಡ್‌ಗೆ ಮಹೇಶ್‌ ತಲೆ ಬಡಿದಿದ್ದು, ತೀವ್ರ ರಕ್ತಸ್ರಾವವಾಗಿ ಮಹೇಶ್‌ ಸಾವನ್ನಪ್ಪಿದ್ದಾನೆ..

ಇದನ್ನು ಓದಿ; 20ರ ಮಾಯಾಂಗನೆಗೆ ಲಕ್ಷ ಲಕ್ಷ ಕಾಣಿಕೆ ಕೊಟ್ಟು ಮೋಸಹೋದ 60ರ ಅರ್ಚಕ..!

ಪೊಲೀಸರು ಆರೋಪಿಗಳಾದ ಅರವಿಂದ್‌, ಕೇಶವ್‌ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.. ಮಹೇಶ್‌ ಜೊತೆ ಬೈಕ್‌ನಲ್ಲಿದ್ದ ಬಾಲಾಜಿ ನೀಡಿದ ದೂರಿನ ಮೇರೆಗೆ ವಿದ್ಯಾರಣ್ಯಪುರ ಪೊಲೀಸ್‌ ಠಾಣೆಯಲ್ಲಿ ಕೊಲೆ ಕೇಸ್‌ ದಾಖಲು ಮಾಡಲಾಗಿದೆ..

Share Post