CrimePolitics

ವಿಚಾರಣೆಗೂ ಬರಲಿಲ್ಲ, ಮನೆಗೆ ಹೋದರೂ ಸಿಗಲಿಲ್ಲ!; ಎಲ್ಲಿ ಹೋದರು ಭವಾನಿ ರೇವಣ್ಣ..?

ಹಾಸನ; ಕೆಆರ್‌ ನಗರದ ಮಹಿಳೆ ಅಪಹರಣ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಬೇಕಿದ್ದ ಭವಾನಿ ರೇವಣ್ಣ ನಾಪತ್ತೆಯಾಗಿದ್ದಾರೆ.. ಎಸ್‌ಐಟಿ ಅಧಿಕಾರಿಗಳು ಇದುವರೆಗೆ ಎರಡು ನೋಟಿಸ್‌ ಕಳುಹಿಸಿದ್ದರು.. ಆದ್ರೆ ಎರಡನೇ ನೋಟಿಸ್‌ಗೆ ಸ್ಪಂದಿಸಿದ್ದ ಭವಾನಿ ರೇವಣ್ಣ ಅವರು ಮನೆಯಲ್ಲೇ ವಿಚಾರಣೆ ಮಾಡುವಂತೆ ಪತ್ರ ಬರೆದಿದ್ದರು.. ನೋಟಿಸ್‌ನಂತೆ ಇಂದು ಭವಾನಿ ರೇವಣ್ಣ ವಿಚಾರಣೆ ಬರಬೇಕಿತ್ತು, ಆದ್ರೆ ಬಂದಿಲ್ಲ.. ಹೀಗಾಗಿ ಎಸ್‌ಐಟಿ ಅಧಿಕಾರಿಗಳು, ಹೊಳೆನರಸೀಪುರದಲ್ಲಿರುವ ನಿವಾಸಕ್ಕೆ ಆಗಮಿಸಿದ್ದಾರೆ.. ಆದ್ರೆ ಅಲ್ಲಿ ಭವಾನಿ ರೇವಣ್ಣ ಅವರು ಇಲ್ಲ.. ಹೀಗಾಗಿ ಅವರಿಗಾಗಿ ಸಂಜೆಯವರೆಗೆ ಅಲ್ಲೇ ಕಾಯಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ..

ಭವಾನಿ ರೇವಣ್ಣ ಅವರು ನಿರೀಕ್ಷಣಾ ಜಾಮೀನಿಗಾಗಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.. ಆದ್ರೆ ನಿನ್ನೆ ಕೋರ್ಟ್‌ ಅವರ ಅರ್ಜಿಯನ್ನು ವಜಾ ಮಾಡಿತ್ತು.. ಹೀಗಾಗಿ ಇಂದು ವಿಚಾರಣೆ ಎದುರಿಸಲೇಬೇಕಾದ ಅನಿವಾರ್ಯತೆ ಇತ್ತು.. ಆದರೂ ಭವಾನಿ ರೇವಣ್ಣ ಅಧಿಕಾರಿಗಳ ಕೈಗೆ ಸಿಕ್ಕಿಲ್ಲ.. ಮಾಹಿತಿ ಪ್ರಕಾರ ಅವರು 15 ದಿನಗಳ ಹಿಂದೆಯೇ ಹೊಳೆನರಸೀಪುರದ ಮನೆ ತೊರೆದಿದ್ದಾರೆ ಎಂದು ಹೇಳಲಾಗುತ್ತಿದೆ.. ಹೀಗಾಗಿ ಅಧಿಕಾರಿಗಳು ಅವರ ಮೊಬೈಲ್‌ ಲೊಕೇಷನ್‌ ಟ್ರೇಸ್‌ ಮಾಡಲು ಮುಂದಾಗಿದ್ದಾರೆ..

 

Share Post