BengaluruCrime

ಕೆಸಿ ಜನರಲ್‌ ಆಸ್ಪತ್ರೆ ಪಾರ್ಕ್‌ನಲ್ಲಿ ನಡೀತು ಬರ್ಬರ ಹತ್ಯೆ!; ಕೊಲೆಗೆ ಕಾರಣ ಏನು ಗೊತ್ತಾ..?

ಬೆಂಗಳೂರು; ಮಲ್ಲೇಶ್ವರಂನ ಕೆಸಿ ಜನರಲ್‌ ಆಸ್ಪತ್ರೆಯ ಪಾರ್ಕ್‌ನಲ್ಲಿ ವ್ಯಕ್ತಿಯ ಬರ್ಬರ ಹತ್ಯೆ ನಡೆದಿದೆ..  37 ವರ್ಷದ ಪನ್ನಿರ್ ಸೆಲ್ವಂ‌ನನ್ನು ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿದೆ.. ಕೊಲೆ ಮಾಡಿದ ನಂತರ ಆರೋಪಿಗಳು ಪರಾರಿಯಾಗಿದ್ದಾರೆ.. ನಿನ್ನೆ ಸಂಜೆ ಈ ಕೃತ್ಯ ಎಸಗಲಾಗಿದ್ದು, ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ..

ಮಲ್ಲೇಶ್ವರಂನ ಎಂಡಿ ಬ್ಲಾಕ್‌ ನಿವಾಸಿಯಾಗಿದ್ದ ಪನ್ನೀರ್‌ ಸೆಲ್ವಂ ಗಾರೆ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.. ಪನ್ನೀರ್‌ ಸೆಲ್ವಂಗೆ ನಾಲ್ವರು ಚಿಕ್ಕಮಕ್ಕಳಿದ್ದು, ಪತ್ನಿ ಜೊತೆ ವಾಸವಿದ್ದರು.. ನಿನ್ನೆ ಸಂಜೆ ಯಾವುದೋ ವಿಚಾರಕ್ಕೆ ಪನ್ನೀರ್‌ ಸೆಲ್ವಂ ಹಾಗೂ ಇತರ ಇಬ್ಬರು ವ್ಯಕ್ತಿಗಳು ಪಾರ್ಕ್‌ನಲ್ಲಿ ಗಲಾಟೆ ಮಾಡುತ್ತಿದ್ದರು.. ಈ ವೇಳೆ ಕೊಲೆ ನಡೆದಿದೆ..

ಕೊಲೆಗೆ ಕಾರಣ ಹಾಗೂ ಕೊಲೆ ಮಾಡಿದವರು ಯಾರು ಎಂಬುದು ಇನ್ನೂ ಕೂಡಾ ಗೊತ್ತಾಗಿಲ್ಲ.. ಮಲ್ಲೇಶ್ವರಂ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ..

 

Share Post