CrimeNational

ಬ್ರಹ್ಮಪುತ್ರ ನದಿಯಲ್ಲಿ ಮಗುಚಿದ ಬೋಟ್‌; ಹಲವರು ನಾಪತ್ತೆ

ಧುಬ್ರಿ; ಅಸ್ಸಾಂನ ಧುಬ್ರಿ ಜಿಲ್ಲೆಯ ಬ್ರಹ್ಮಪುತ್ರ ನದಿಯಲ್ಲಿ ಬೋಟ್‌ ಒಂದು ಮಗುಚಿ ಬಿದ್ದಿದೆ. ಶಾಲಾ ವಿದ್ಯಾರ್ಥಿಗಳು ಸೇರಿ ನೂರು ಮಂದಿ ಇದರಲ್ಲಿ ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ವಿದ್ಯಾರ್ಥಿಗಳು ಸೇರಿ ಹಲವರು ನಾಪತ್ತೆಯಾಗಿದ್ದಾರೆ.

ಸ್ಥಳೀಯರ ಪ್ರಕಾರ, ಬೋಟ್‌ನಲ್ಲಿ ಪ್ರಯಾಣಿಕರ ಜೊತೆ 10 ಮೋಟರ್‌ಸೈಕಲ್ ಅನ್ನು ಸಹ ಸಾಗಿಸಲಾಗುತ್ತಿತ್ತು. ಭಶಾನಿಯತ್ತ ಸಾಗುತ್ತಿದ್ದ ಬೋಟ್, ಧುಬ್ರಿ ಪಟ್ಟಣದಿಂದ ಸುಮಾರು 3 ಕಿ.ಮೀ. ದೂರದಲ್ಲಿ ಅದಬಾರಿ ಸೇತುವೆಯ ಕಂಬಕ್ಕೆ ಡಿಕ್ಕಿ ಹೊಡೆದಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಈವರೆಗೆ 15 ಮಂದಿಯನ್ನು ರಕ್ಷಿಸಲಾಗಿದೆ. ಸರ್ಕಾರಿ ಸಿಬ್ಬಂದಿಗಳು ಸಹ ಈ ಬೋಟ್‌ನಲ್ಲಿ ಸಂಚರಿಸುತ್ತಿದ್ದರು ಎಂದು ತಿಳಿದು ಬಂದಿದೆ.

Share Post