CrimeDistricts

ಮದುವೆಗೆ ಒಪ್ಪದಿದ್ದಕ್ಕೆ ಶಾಲೆಗೆ ಹೊರಟಿದ್ದ ಶಿಕ್ಷಕಿಯ ಅಪಹರಣ!

ಹಾಸನ; ಮದುವೆ ಪ್ರಸ್ತಾಪ ಒಪ್ಪದಿದ್ದಕ್ಕೆ ಶಾಲೆಗೆ ಹೊರಟಿದ್ದ ಶಿಕ್ಷಕಿಯನ್ನು ಅಪಹರಣ ಮಾಡಿರುವ ಘಟನೆ ಹಾಸನ ನಗರದಲ್ಲಿ ನಡೆದಿದೆ. ಹಾಸನ ನಗರದ ಹೊರವಲಯದ ಬಿಟ್ಟಗೌಡನಹಳ್ಳಿಯಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ.

ಇಂದು ಬೆಳಗ್ಗೆ ಶಾಲೆಯ ಶಿಕ್ಷಕಿ ಕೆಲಸಕ್ಕೆಂದು ಶಾಲೆಗೆ ತೆರಳುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ರಾಮು ಎಂಬಾತ ಆಕೆಯನ್ನು ಸಿನಿಮೀಯ ರೀತಿಯಲ್ಲಿ ಅಪಹರಣ ಮಾಡಿಕೊಂಡು ಹೋಗಿದ್ದಾನೆ.

ಕಳೆದ ಹದಿನೈದು ದಿನಗಳ ಹಿಂದೆ ಆರೋಪಿ ರಾಮು ಹಾಗೂ ಅವರ ಕುಟುಂಬದವರು ಹೆಣ್ಣು ಕೇಳಲು ಶಿಕ್ಷಕಿಯ ಮನೆಗೆ ಬಂದಿದ್ದರು. ಶಿಕ್ಷಕಿಯೊಂದಿಗೆ ಮದುವೆಯಾಗಲು ರಾಮು ಕುಟುಂಬ ಪ್ರಸ್ತಾಪವಿಟ್ಟಿತ್ತು. ಆದ್ರೆ ಶಿಕ್ಷಕಿ ಹಾಗೂ ಅವರ ಮನೆಯವರು ಇದಕ್ಕೆ ಒಪ್ಪಿಲ್ಲ.

ಇದರಿಂದ ಆಕ್ರೋಶಗೊಂಡಿದ್ದ ರಾಮು ಪ್ಲ್ಯಾನ್‌ ಮಾಡಿ, ಶಾಲೆಗೆ ಹೊರಟಿದ್ದ ಶಿಕ್ಷಕಿಯನ್ನು ಅಪಹರಿಸಿಕೊಂಡು ಹೋಗಿದ್ದಾನೆ. ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹುಡುಕಾಟ  ನಡೆಸುತ್ತಿದ್ದಾರೆ.

 

Share Post