CrimeDistricts

ನಡುರಸ್ತೆಯಲ್ಲಿ ಹೊತ್ತಿ ಉರಿದ ಬಸ್‌; ಪ್ರಯಾಣಿಕರು ಬಚಾವಾಗಿದ್ದೇ ಪವಾಡ!

ವಿಜಯಪುರ; ವಿಜಯಪುರದ ಬಳಿ ಭಾರಿ ಅಗ್ನಿ ದುರಂತ ನಡೆದಿದೆ. ಇಂದು ಬೆಳಗ್ಗೆ ಹಿಟ್ಟನಹಳ್ಳಿ ಬಳಿ ಜನತಾ ಟ್ರಾವೆಲ್ಸ್‌ಗೆ ಸೇರಿದ ಬಸ್‌ ಟೈಯರ್‌ ಸ್ಫೋಟಗೊಂಡು ಇಡೀ ಬಸ್‌ಗೆ ಬೆಂಕಿ ಆವರಿಸಿದೆ. ಪ್ರಯಾಣಿಕರು ಬೇಗ ಬಸ್‌ನಿಂದ ಇಳಿದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದ್ರೆ ಬಸ್‌ ಸಂಪೂರ್ಣ ಸುಟ್ಟು ಕರಕಲಾಗಿದೆ. 

ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಈ ದುರ್ಘಟನೆ ನಡೆದಿದೆ. ಬಸ್‌ ಬೆಂಗಳೂರಿನಿಂದ ವಿಜಯಪುರಕ್ಕೆ ಬರುತ್ತಿತ್ತು. ಇನ್ನೇನು ಐದತ್ತು  ನಿಮಿಷದಲ್ಲಿ ವಿಜಯಪುರ ಸೇರಬೇಕಿತ್ತು. ಆ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ಘಟನೆಯಿಂದಾಗಿ ಪ್ರಯಾಣಿಕರ ಬೆಲೆಬಾಳುವ ವಸ್ತುಗಳು, ಬಟ್ಟೆಗಳು ಸುಟ್ಟು ಭಸ್ಮವಾಗಿವೆ.

ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರಾದರೂ ಅಷ್ಟೊತ್ತಿಗೆ ಬಸ್‌ ಸಂಪೂರ್ಣ ಸುಟ್ಟು ಕರಕಲಾಗಿತ್ತು.

 

Share Post