BengaluruCrime

ರಸ್ತೆಯಲ್ಲೇ ಹೊತ್ತಿ ಉರಿದ ಕಾರು; ಕೊಡಗಿನಲ್ಲಿ ಪಲ್ಟಿ ಹೊಡೆದ ಬಸ್‌!

ಬೆಂಗಳೂರು; ಇಂದು ರಾಜ್ಯದ ವಿವಿಧೆಡೆ ಹಲವು ಅಹಿತಕರ ಘಟನೆಗಳು ನಡೆದಿದೆ.. ಮಂಗಳೂರಿನ ಬಳಿ ಕಾರೊಂದು ಹೊತ್ತಿ ಉರಿದಿದೆ.. ಕೊಡಗಿನಲ್ಲಿ ಖಾಸಗಿ ಬಸ್ಸೊಂದು ಪಲ್ಟಿ ಹೊಡೆದು ಅವಾಂತರ ಸೃಷ್ಟಿ ಮಾಡಿದೆ.. ಇತ್ತ ನಿಂತಿದ್ದ ಕಸದ ಲಾರಿಗೆ ಡಿಕ್ಕಿ ಹೊಡೆದಿದ್ದರಿಂದ ಟೆಕ್ಕಿ ಸಾವನ್ನಪ್ಪಿದ್ದಾನೆ.. ಈ ಎಲ್ಲಾ ಸುದ್ದಿಗಳ ವಿವರಗಳನ್ನು ಈ ಸ್ಟೋರಿಯಲ್ಲಿ ನೋಡೋಣ..

ಮಂಗಳೂರು ಬಳಿ ಹೊತ್ತಿ ಉರಿದ ಕಾರು;

ಮಂಗಳೂರು; ಸಂಚರಿಸುತ್ತಿದ್ದ ರೆನಾಲ್ಟ್‌ ಡಸ್ಟರ್‌ ಕಾರಿನಲ್ಲಿ ದಿಢೀರ್‌ ಬೆಂಕಿ ಕಾಣಿಸಿಕೊಂಡಿದೆ.. ಇದಕ್ಕಿದ್ದಂತೆ ಇದು ಹೊತ್ತಿ ಉರಿದಿದ್ದು, ಇಡೀ ಕಾರು ಸುಟ್ಟು ಭಸ್ಮವಾಗಿದೆ.. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ರಾಯಿ ಕಂಗಿತ್ತಿಲು ಬಳಿ ಈ ದುರ್ಘಟನೆ ನಡೆದಿದೆ.. ಕಾರು ಬಂಟ್ವಾಳದಿಂದ ಮೂಡಬಿದ್ರೆಗೆ ತೆರಳುತ್ತಿತ್ತು.. ಈ ವೇಳೆ ಈ ದುರ್ಘಟನೆ ನಡೆದಿದೆ.

ಕಾರಿನಲ್ಲಿ ಬಾಲಕಿ ಹಾಗೂ ಗಂಡ-ಹೆಂಡತಿ ಪ್ರಯಾಣ ಮಾಡುತ್ತಿದ್ದರು.. ಅದೃಷ್ಟವಶಾತ್‌ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.. ಬಹುಬೇಗ ಅವರು ಕಾರಿನಿಂದ ಇಳಿದಿದ್ದರಿಂದ ಯಾವುದೇ ಅನಾಹುತವಾಗಿಲ್ಲ.. ಆದ್ರೆ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿಯನ್ನು ನಂದಿಸಿದ್ದಾರೆ.

ಕೊಡಗಿನಲ್ಲಿ ಪಲ್ಟಿ ಹೊಡೆದ ಖಾಸಗಿ ಬಸ್‌;

ಕೊಡಗು; ಇನ್ನು ಕೊಡಗಿನಲ್ಲಿ ಖಾಸಗಿ ಬಸ್ಸೊಂದು ಪಲ್ಟಿ ಹೊಡೆದಿದ್ದು, ಇದರಿಂದ ಟ್ರಾಫಿಕ್‌ ಜಾಮ್‌ ಉಂಟಾಗಿ ಅವಾಂತರ ಸೃಷ್ಟಿ ಮಾಡಿದೆ..  ರಾಷ್ಟೀಯ ಹೆದ್ದಾರಿ 275ರ ಸಂಪಾಜೆ ಬಳಿ ಈ ದುರ್ಘಟನೆ ನಡೆದಿದೆ.. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ.. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ..

ಗೌರಿ ಶಂಕರ ಹೆಸರಿನ ಬಸ್‌ ಇದಾಗಿದೆ.. ಈ ಬಸ್ಸು ಬೆಂಗಳೂರಿನಿಂದ ಮಡಿಕೇರಿ ಮಾರ್ಗವಾಗಿ ಸುಳ್ಯ ಹೋಗುತ್ತಿತ್ತು.. ಈ ವೇಳೆ ಸಂಪಾಜೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್‌ ಪಲ್ಟಿ ಹೊಡೆದಿದೆ.. ರಸ್ತೆಗೆ ಅಡ್ಡಲಾಗಿ ಬಸ್‌ ಬಿದ್ದಿತ್ತು. ಹೀಗಾಗಿ ಹಲವು ಗಂಟೆಗಳ ಕಾಲ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಕಸದ ಲಾರಿಗೆ ಕಾರು ಡಿಕ್ಕಿ, ಟೆಕ್ಕಿ ಸಾವು;

ಬೆಂಗಳೂರು; ಬೆಂಗಳೂರಿನಲ್ಲಿ ಭೀಕರ ಅಪಘಾತ ಸಂಭವಿಸಿದೆ.. ವೈಟ್‌ ಫೀಲ್ಡ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಿಂತಿದ್ದ ಕಸದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ.. ಇದರಿಂದಾಗಿ ಟೆಕ್ಕಿಯೊಬ್ಬ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಒಡಿಶಾ ಮೂಲದ ಸಾಗರ್ ( 23) ಎಂಬ ಟೆಕ್ಕಿಯೇ ಸಾವನ್ನಪ್ಪಿರುವಾತ ಸಾವನ್ನಪ್ಪಿದ ಯುವಕ. ನಿನ್ನೆ ರಾತ್ರಿ 10:30ರ ವೇಳೆ ಬಾಲಗತ್ತ್ ಜಂಕ್ಷನ್​ ಬಳಿ ಈ ದುರ್ಘಟನೆ ನಡೆದಿದೆ.

 

Share Post