BengaluruCrime

ಮಹಿಳೆ ಅಪಹರಿಸಿ ಸಾಮೂಹಿಕ ಅತ್ಯಾಚಾರ, ಕೊಲೆ; ಬ್ಯಾಂಕ್ ಮ್ಯಾನೇಜರ್ ಆರೋಪಿ!

ಬೆಂಗಳೂರು; 11 ವರ್ಷಗಳ ಹಿಂದೆ ನಡೆದಿದ್ದ ಮಹಿಳೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.. ಇದರಲ್ಲಿ ಕೆನರಾ ಬ್ಯಾಂಕ್ ಮ್ಯಾನೇಜರ್ ಒಬ್ಬರು ಕೂಡಾ ಸೇರಿದ್ದಾರೆ..

   2013ರ ಫೆಬ್ರವರಿ 15ರಂದು ಚಿಕ್ಕಜಾಲ ಬಳಿಯ ಮುತ್ತುಕದಹಳ್ಳಿ ನೀಲಗಿರಿ ತೋಪಿನಲ್ಲಿ ಮಹಿಳೆಯ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು.. ಕೆಲಸ ಮುಗಿಸಿ ಮನೆಗೆ ಹೊರಟಿದ್ದ ಮಹಿಳೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿತ್ತು.. ಇದರ ತನಿಖೆ ಕೈಗೊಂಡಿದ್ದ ಸಿಐಡಿ ಅಧಿಕಾರಿಗಳು ಕೊನೆಗೂ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ..

    ಕೆನರಾ ಬ್ಯಾಂಕ್ ವ್ಯವಸ್ಥಾಪಕ ಸೇರಿದಂತೆ ಮೂವರ ವಿರುದ್ಧ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

   ಕೆನರಾ ಬ್ಯಾಂಕ್ ಮಹಾಲಕ್ಷ್ಮಿ ಲೇಔಟ್ ಶಾಖೆಯ ವ್ಯವಸ್ಥಾಪಕ ನರಸಿಂಹಮೂರ್ತಿ, ಈತನ ಸಹಚರರಾದ ಎನ್‌. ಹರಿಪ್ರಸಾದ್ ಹಾಗೂ ಸಿ. ದೀಪಕ್ ಅವರನ್ನು ಬಂಧಿಸಲಾಗಿದೆ. ಇವರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

  ಇದಕ್ಕೂ ಮೊದಲು ಮಹಿಳೆಯ ಪತಿಯನ್ನೇ ಬಂಧಿಸಲಾಗಿತ್ತು.. ಹಲವು ದಿನಗಳ ಕಾಲ ಆತ ಜೈಲಿನಲ್ಲಿದ್ದ.. ಆದ್ರೆ ಆತನ ವಿರುದ್ಧ ಯಾವುದೇ ಪುರಾವೆ ದೊರೆಯದ ಕಾರಣ ಆತನನ್ನು ಬಿಡುಗಡೆ ಮಾಡಲಾಗಿತ್ತು..

 

Share Post