CinemaCrimeDistricts

ಸುದೀಪ್‌ ಬರದೇ ಇದ್ದುದಕ್ಕೆ ಕುರ್ಚಿಗಳನ್ನು ಒಡೆದ ಅಭಿಮಾನಿಗಳು

ದಾವಣಗೆರೆ; ದಾವಣಗೆರೆಯ ರಾಜನಹಳ್ಳಿ ವಾಲ್ಮೀಕಿ ಜಾತ್ರೆಗೆ ನಟ ಸುದೀಪ್‌ ಬರೆದೇ ಇದ್ದುದಕ್ಕೆ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಇದೇ ಕಾರಣವಿಟ್ಟುಕೊಂಡು ಸುದೀಪ್‌ ಅಭಿಮಾನಿಗಳು ಜಾತ್ರೆಯಲ್ಲಿ ಕುರ್ಚಿಗಳನ್ನು ಒಡೆದುಹಾಕಿ ಆಕ್ರೋಶ ಹೊರಹಾಕಿದ್ದಾರೆ.

ಸುದೀಪ್‌ ಅಭಿಮಾನಿಗಳು ಇಂದು ಬೆಳಗ್ಗೆಯಿಂದಲೇ ಸುದೀಪ್‌ ಫೋಟೋ ಹಿಡಿದುಕೊಂಡು ಸುದೀಪ್‌ಗಾಗಿ ಕಾಯುತ್ತಿದ್ದರು. ಸುದೀಪ್‌ಗೆ ಜೈಕಾರ ಕೂಗುತ್ತಿದ್ದರು. ಯಾಕಂದ್ರೆ ಕಾರ್ಯಕ್ರಮಕ್ಕೆ ಸುದೀಪ್‌ ಬರಲಿದ್ದಾರೆ ಎಂಬ ಸುದ್ದಿಯಾಗಿತ್ತು. ಆದ್ರೆ ಸುದೀಪ್‌ ಬರದೇ ಇದ್ದಾಗ ಅಭಿಮಾನಿಗಳು ಈ ರೀತಿ ಆಕ್ರೋಶ ಹೊರಹಾಕಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಭಾಗಿ ಆಗಿದ್ದರು.

ಇನ್ನು ಈ ಬಗ್ಗೆ ನಟ ಸುದೀಪ್‌ ಪ್ರತಿಕ್ರಿಯೆ ನೀಡಿದ್ದಾರೆ. ಅಭಿಮಾನಿಗಳ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ನನಗೆ ಈ ಜಾತ್ರಾ ಕಾರ್ಯಕ್ರಮಕ್ಕೆ ಯಾವುದೇ ಆಹ್ವಾನ ನೀಡಿರಲಿಲ್ಲ. ಅಷ್ಟೇ ಅಲ್ಲ, ಜಾತ್ರಾ ಕಾರ್ಯಕ್ರಮ ನಡೆಯುತ್ತಿರುವ ಬಗ್ಗೆ ಗೊತ್ತೂ ಇರಲಿಲ್ಲ. ಹಾಗಾಗಿ ಬರುವದಕ್ಕೆ ಆಗಲಿಲ್ಲ. ಅಭಿಮಾನಿಗಳ ಈ ನಡೆ ಬೇಸರ ತರಿಸಿದೆ ಎಂದು ಸುದೀಪ್‌ ಹೇಳಿಕೊಂಡಿದ್ದಾರೆ.

Share Post