Cinema

ಡಾ. ರಾಜ್‌ಕುಮಾರ್‌ ಕುಟುಂಬಸ್ಥರಿಂದ ಅಪ್ಪು ಹುಟ್ಟು ಹಬ್ಬ ಆಚರಣೆ: ಶಕ್ತಿಧಾಮಕ್ಕೆ ಶಿವಣ್ಣದಂಪತಿ ಭೇಟಿ

ಬೆಂಗಳೂರು: ʻರಾಜಕುಮಾರʼನಿಗೆ 47ನೇ ಹುಟ್ಟು ಹಬ್ಬದ ಸಂಭ್ರಮ, ರಾಜ್ಯದ ಮೂಲೆ ಮೂಲೆಯಲ್ಲಿ ಅಪ್ಪು ಹುಟ್ಟಹುಬ್ಬ ಆಚರಣೆ  ಭರ್ಜರಿಯಾಗಿ ನಡೆಯುತ್ತಿದೆ. ಅಂತೆಯೇ ಡಾ.ರಾಜ್‌ಕುಮಾರ್‌ ಕುಟುಂಬಸ್ಥರು ಕೂಡ ಪುನೀತ್‌ ರಾಜ್‌ಕುಮಾರ್‌ ಬರ್ತಡೇ ಸೆಲಬ್ರೇಷನ್‌ ಮಾಡ್ತಿದಾರೆ. ಕಂಠೀರವ ಸ್ಟೇಡಿಯಂ ಬಳಿ ರಾಘಣ್ಣ ಕೇಕ್‌ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಣೆ ಮಾಡಿದ್ರು. ರಾಘಣ್ಣನಿಗೆ ಅಭಿಮಾನಿಗಳು ಸಾಥ್‌ ನೀಡಿದ್ರು. ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ತಮ್ಮ ಸಂತೋಷವನ್ನ ವ್ಯಕ್ತಪಡಿಸಿದ್ರು. ಅಪ್ಪು ಸಮಾಧಿ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಸ್ಟೇಡಿಯಂ ಬಳಿ ಕಿಕ್ಕಿರಿದು ಜನ ಸೇರಿದ್ರು. ಹಾಗಾಗಿ ಕಂಠೀರವ ಸ್ಟೇಡಿಯಂ ಬಳಿ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ.

ಈ ವೇಳೆ ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್‌ ಅಪ್ಪು ನಮ್ಮ ಜತೆ ಇಲ್ಲವೆಂದು ನಾನು ಹೇಗೆ ಹೇಳಲಿ? ಎಲ್ಲಾ ಅಭಿಮಾನಿಗಳಲ್ಲಿ ನಾನು ಅಪ್ಪುವನ್ನು ಕಾಣುತ್ತಿದ್ದೇನೆ’ ಎಂದು ನಟ ರಾಘವೇಂದ್ರ ರಾಜ್​ಕುಮಾರ್ ನುಡಿದಿದ್ದಾರೆ. ‘‘ನನ್ನ ತಮ್ಮನ ನಿಮ್ಮಲ್ಲೇ ನೋಡುತ್ತೇನೆ. ಇನ್ಮುಂದೆ ಅಭಿಮಾನಿಗಳಲ್ಲಿ ಅಪ್ಪು ಕಾಣಿಸುತ್ತಾರೆ. ಜೇಮ್ಸ್ ಚಿತ್ರದಲ್ಲೂ ಅಪ್ಪು ಜೀವಂತನೇ. ಇದು ಅಭಿಮಾನಿಗಳ ಅಪ್ಪು ಹಬ್ಬ’’ ಎಂದು ಭಾವುಕರಾದ್ರು.

ಇನ್ನು ಇದೇ ಸಂದರ್ಭದಲ್ಲಿ ಅಪ್ಪುಗೆ ಅಚ್ಚುಮೆಚ್ಚಿನ ಸ್ಥಳ ʻಶಕ್ತಿಧಾಮʼ. ಮೈಸೂರಿನ ಊಟಿ ರಸ್ತೆಯಲ್ಲಿರುವ ಶಕ್ತಿಧಾಮಕ್ಕೆ ನಟ ಶಿವರಾಜ್​ಕುಮಾರ್ ದಂಪತಿ ಭೇಟಿ ನೀಡಿದ್ದಾರೆ. ಪತ್ನಿ ಗೀತಾ ಜೊತೆ ಸ್ವತಃ ಬೈಕ್ ಚಲಾಯಿಸಿಕೊಂಡು ಶಿವಣ್ಣ ಭೇಟಿ ನೀಡಿದ್ದಾರೆ. ಮೂರು ದಿನಗಳಿಂದ ಶಿವಣ್ಣ ದಂಪತಿ ಶಕ್ತಿ‌ಧಾಮದ ಮಕ್ಕಳ ಜೊತೆಗಿದ್ದಾರೆ. ಸಹೋದರ ಪುನೀತ್‌ ಜೇಮ್ಸ್ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಇಂದು ಮೈಸೂರಿನ ಚಿತ್ರಮಂದಿರಗಳಿಗೆ ಶಿವಣ್ಣ ಭೇಟಿ ನೀಡಲಿದ್ದಾರೆ. ಗಾಯತ್ರಿ, ವುಡ್‌ಲ್ಯಾಂಡ್, ಸಂಗಂ ಚಿತ್ರಮಂದಿರಗಳಿಗೆ ಅವರು ಭೇಟಿ ನೀಡಲಿದ್ದು, ಸಂಜೆ ಮೈಸೂರಿನಲ್ಲೇ ಸ್ನೇಹಿತರೊಂದಿಗೆ ಸೇರಿ ಜೇಮ್ಸ್ ಚಿತ್ರವನ್ನು ವೀಕ್ಷಿಸಲಿದ್ದಾರೆ.

Share Post