BengaluruPolitics

ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾದ ವೈ.ಎಸ್‌.ಶರ್ಮಿಳಾ

ಬೆಂಗಳೂರು; ಆಂಧ್ರ ಮಾಜಿ ಸಿಎಂ ದಿವಂಗತ ವೈ.ಎಸ್‌.ರಾಜಶೇಖರರೆಡ್ಡಿ ಮಗಳು ವೈಎಸ್ ಶರ್ಮಿಳಾ ಅವರು ಸೋಮವಾರ ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದರು. ಶರ್ಮಿಳಾ ಅವರು ಬೆಂಗಳೂರಿನಲ್ಲಿ ಡಿಕೆಶಿ ಅವರನ್ನು ಅಭಿನಂದಿಸಿದರು. ಪಕ್ಷವನ್ನು ಅಧಿಕಾರಕ್ಕೆ ತರಲು ಶಿವಕುಮಾರ್ ಶ್ರಮಿಸಿದ್ದಾರೆ ಎಂದು ಅಭಿನಂದಿಸಿದರು. ಈ ಸಂದರ್ಭದಲ್ಲಿ ವೈಎಸ್ ಆರ್ ಜೊತೆಗಿನ ಒಡನಾಟವನ್ನು ಡಿಕೆ ಶಿವಕುಮಾರ್ ಸ್ಮರಿಸಿದರು.

ಹೊಸ ಪಕ್ಷ ಸ್ಥಾಪನೆಯಾದಾಗಿನಿಂದ ವೈಎಸ್ ಶರ್ಮಿಳಾ ತೆಲಂಗಾಣ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಅದರಲ್ಲೂ ಬಿಆರ್ ಎಸ್ ಸರ್ಕಾರದ ವಿರುದ್ಧ ಟೀಕೆ ಹಾಗೂ ಸಿಎಂ ಕೆಸಿಆರ್ ಕುಟುಂಬದ ವಿರುದ್ಧ ಕಟು ಟೀಕೆ ಮೂಲಕ ಸುದ್ದಿಯಲ್ಲಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ನಾಯಕತ್ವ ಶರ್ಮಿಳಾ ಮೇಲೆ ಕೇಂದ್ರಿಕರಿಸಿದೆ. ಕರ್ನಾಟಕದಲ್ಲಿ ಗೆದ್ದ ನಂತರ ಪ್ರಿಯಾಂಕಾ ಗಾಂಧಿ ಶರ್ಮಿಳಾ ಅವರಿಗೆ ಫೋನ್ ಮಾಡಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದು ಸಂಚಲನ ಮೂಡಿಸಿತ್ತು. ಶರ್ಮಿಳಾ ಕೂಡ ಪ್ರಿಯಾಂಕಾ ಫೋನ್ ಗೆ ಪಾಸಿಟಿವ್ ಆಗಿ ಮಾತನಾಡಿದ್ದಾರಂತೆ. ಶರ್ಮಿಳಾ ಕಾಂಗ್ರೆಸ್‌ಗೆ ಹತ್ತಿರವಾಗುತ್ತಾರಾ? ಎಂಬ ಬಗ್ಗೆ ಮಾತುಗಳು ಕೇಳಿಬರುತ್ತಿದೆ. ಈ ಬೆನ್ನಲ್ಲೇ  ಡಿಕೆ ಶಿವಕುಮಾರ್ ಅವರನ್ನು ಭೇಟಿ ಶರ್ಮಿಳಾ ಭೇಟಿ ಮಾಡಿರುವುದು ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.

 

Share Post