BengaluruPolitics

ಮೂರನೇ ಅಭ್ಯರ್ಥಿ ಕೂಡಾ ಗೆಲ್ಲುವ ವಿಶ್ವಾಸ; ಯಡಿಯೂರಪ್ಪ

ಬೆಂಗಳೂರು; ರಾಜ್ಯ ವಿಧಾನಸಭೆಯಿಂದ ಆಯ್ಕೆಯಾಗುವ ರಾಜ್ಯಸಭಾ ಸ್ಥಾನಗಳಲ್ಲಿ ಎರಡು ಸ್ಥಾನಗಳಲ್ಲಿ ಗೆಲ್ಲಲು ನಮಗೆ ಶಕ್ತಿ ಇದೆ. ಎರಡು ಸ್ಥಾನಗಳು ಗೆದ್ದ ಮೇಲೂ ಒಂದಷ್ಟು ಹೆಚ್ಚುವರಿ ಶಾಸಕರಿರುವುದರಿಂದ ನಾವು ಮೂರನೇ ಅಭ್ಯರ್ಥಿಯಾಗಿ ಲೆಹರ್‌ ಸಿಂಗ್‌ ಅವರನ್ನು ಕಣಕ್ಕಿಳಿಸಿದ್ದೇವೆ. ಅವರನ್ನೂ ಗೆಲ್ಲಿಸಿಕೊಳ್ಳುವ ವಿಶ್ವಾಸ ನಮಗಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

 

ವಿಧಾನಸೌಧದಲ್ಲಿ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಅವರು, ಮೂರನೇ ಅಭ್ಯರ್ಥಿ ಕೂಡಾ ಗೆಲ್ಲೋದಕ್ಕೆ ಏನೆಲ್ಲಾ ಪ್ರಯತ್ನ ಮಾಡಬೇಕು ಅದನ್ನು ನಾವೆಲ್ಲಾ ನಾಯಕರು ಸೇರಿಕೊಂಡು ಮಾಡುತ್ತೇವೆ. ಮೂರನೇ ಅಭ್ಯರ್ಥಿ ಕೂಡಾ ನಮ್ಮ ಪಕ್ಷದವರೇ ಗೆಲ್ಲಲಿದ್ದಾರೆ ಎಂದು ಹೇಳಿದರು.

 

Share Post