BengaluruCrime

ಗಂಡನ ಎದುರೇ ಅಪಘಾತಕ್ಕೆ ಬಲಿಯಾದ ಪತ್ನಿ; ಚಿಕ್ಕಗೊಲ್ಲರಹಟ್ಟಿ ಬಳಿ ದಾರುಣ

ಬೆಂಗಳೂರು; ಗಂಡನ ಎದುರೇ ಪತ್ನಿ ಅಪಘಾತಕ್ಕೆ ಬಲಿಯಾದರೆ ಅವರ ಸ್ಥಿತಿ ಹೇಗಾಗಿರಬೇಡ. ಅಂತಹ ಒಂದು ದಾರುಣ ಘಟನೆ ಬೆಂಗಳೂರಿನ ಚಿಕ್ಕಗೊಲ್ಲರಹಟ್ಟಿಯಲ್ಲಿ ನಡೆದಿದೆ. ಪತಿ ಹಾಗೂ ಪತ್ನಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಸ್ಕೂಟರ್‌ ಟೈರ್‌ಗೆ ಕಲ್ಲು ಸಿಲುಕಿದೆ. ಇದ್ರಿಂದ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಇದೇ ವೇಳೆ ಶಾಲಾ ಬಸ್ಸೊಂದು ಬಂದಿದ್ದು, ಪತ್ನಿಯ ತಲೆಯ ಮೇಲೆ ಹತ್ತಿಬಿಟ್ಟಿದೆ.

ಐವತ್ತೆಂಟು ವರ್ಷದ ಸುಮಂಗಲಾ ಮೃತಪಟ್ಟವರು. ಪತಿ ಶರಣಪ್ಪ ಎದುರಲ್ಲೇ ದುರ್ಘಟನೆ ನಡೆದಿದೆ. ಕಳೆದ ವಾರ ಯುವಕನೊಬ್ಬ ಇದೇ ರಸ್ತೆಯಲ್ಲಿ ಲಾರಿಗೆ ಸಿಲುಕಿ ಮೃತಪಟ್ಟಿದ್ದ. ಈ ಕಹಿ ಘಟನೆ ಮರೆಯುವ ಮುನ್ನವೇ ಇಂತಹದ್ದೊಂದು ಘಟನೆ ನಡೆದಿದೆ, ಶಾಲಾ ಬಸ್‌ ಚಾಲಕ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

Share Post