Bengaluru

ನಮಗೂ ಶೇ.8ರಷ್ಟು ಮೀಸಲಾತಿ ಬೇಕು; ನಿರ್ಮಲಾನಂದ ಸ್ವಾಮೀಜಿ

ಬೆಂಗಳೂರು; ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟದ ಬೆನ್ನಲ್ಲೇ ಒಕ್ಕಲಿಗರು ಕೂಡಾ ಮೀಸಲಾತಿ ಹೋರಾಟಕ್ಕೆ ಸಜ್ಜಾಗುತ್ತಿರುವಂತೆ ಕಾಣುತ್ತಿದೆ. ಈ ಬಗ್ಗೆ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿಯವರೇ ಮಾತನಾಡಿದ್ದಾರೆ. ನಮ್ಮ ಸಮುದಾಯಕ್ಕೆ ಇನ್ನೂ ಶೇಕಡಾ 8 ರಷ್ಟು ಮೀಸಲಾತಿ ಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ನಮ್ಮ ಸಮುದಾಯಕ್ಕೆ ಕೂಡಾ ಹೆಚ್ಚಿನ ಮೀಸಲಾತಿ ಸಿಗಬೇಕಾಗಿದೆ. ಇದಕ್ಕಾಗಿ ನಾವೂ ಕೂಡಾ ಹೋರಾಟಕ್ಕಿಳಿಬೇಕಾದ ಅವಶ್ಯಕತೆ ಇದೆ ಎಂದು ನಿರ್ಮಲಾನಂದಸ್ವಾಮೀಜಿ ಹೇಳಿದ್ದಾರೆ.

Share Post