BengaluruPolitics

ಡಿಕೆಶಿ-ಸಿದ್ದರಾಮಯ್ಯ ಸಂಭಾಷಣೆ ವಿಡಿಯೋ; ಬಿಜೆಪಿ 62 ದಾಟಲ್ಲ, ಜೆಡಿಎಸ್‌ಗೆ 20-23 ಸ್ಥಾನ

ಬೆಂಗಳೂರು; ಮತದಾನಕ್ಕೆ ಇನ್ನೆರಡು ದಿನವಷ್ಟೇ ಬಾಕಿ ಇದೆ. ಇದೇ ವೇಳೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರು ಚುನಾವಣೆ ಬಗ್ಗೆ ಸಂಭಾಷಣೆ ನಡೆಸಿರುವ ಎರಡು ವಿಡಿಯೋ ರಿಲೀಸ್‌ ಆಗಿವೆ. ಇಬ್ಬರು ಚರ್ಚೆ ನಡೆಸಿ ಅದನ್ನು ಚಿತ್ರೀಕರಿಸಿ ಕಾಂಗ್ರೆಸ್‌ ಪಕ್ಷವೇ ಅದನ್ನು ರಿಲೀಸ್‌ ಮಾಡಿದೆ. ಇದರಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸಂಭಾಷಣೆ ನಡೆಸಿದ್ದಾರೆ. ಚುನಾವಣೆಗೆ ಸಂಬಂಧಪಟ್ಟ ಹಲವು ವಿಚಾರಗಳನ್ನು ಇದರಲ್ಲಿ ಮಾತನಾಡಿದ್ದಾರೆ.

ಈ ವಿಡಿಯೋದಲ್ಲಿ ಡಿಕೆ.ಶಿವಕುಮಾರ್‌ ಅವರು ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಿದ್ದಾರೆ. ಜೊತೆ ಪ್ರಚಾರದಲ್ಲಿ ಸಿಕ್ಕ ಪ್ರತಿಕ್ರಿಯೆಗಳ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ಡಿ.ಕೆ.ಶಿವಕುಮಾರ್‌ ಅವರು ಈ ಬಾರಿ ಬಿಜೆಪಿ 62 ಸೀಟು ಗೆದ್ದರೆ ಹೆಚ್ಚು ಎಂದು ಹೇಳಿದ್ದಾರೆ. ಜೆಡಿಎಸ್‌ಗೆ 20-23 ಸೀಟು ಸಿಗಬಹುದು ಎಂದು ಅಂದಾಜಿಸಿದ್ದಾರೆ. ಪಕ್ಷೇತರರು ಮೂವರು ಗೆಲ್ಲಬಹುದು ಎಂದು ಡಿ.ಕೆ.ಶಿವಕುಮಾರ್‌ ಹೇಳಿದರೆ, ನನ್ನ ಪ್ರಕಾರ ಐದು ಮಂದಿ ಗೆಲ್ಲುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇನ್ನು ನಾವು ಅಧಿಕಾರಕ್ಕೆ ಬಂದರೆ ಇಂದಿರಾ ಕ್ಯಾಂಟೀನ್‌ ಅನ್ನು ಮತ್ತೆ ಪ್ರಾರಂಭ ಮಾಡೋಣ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಅದಕ್ಕೆ ಡಿ.ಕೆ.ಶಿವಕುಮಾರ್‌ ಅವರು ಬಿಜೆಪಿಗರು ಇಂದಿರಾ ಕ್ಯಾಂಟೀನ್‌ನಲ್ಲೇ ಊಟ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಅವರು ಅವರು ಅಟಲ್‌ ಕ್ಯಾಂಟೀನ್‌ ಮಾಡುತ್ತಾರಂತೆ ಎಂದು ಹೇಳುತ್ತಾರೆ. ಅದಕ್ಕೆ ಡಿ.ಕೆ.ಶಿವಕುಮಾರ್‌ ಅವರು ಅವರ ಎಲ್ಲಿ ಗೆಲ್ತಾರೆ. ಬಿಜೆಪಿಗೆ 62 ಸೀಟು ಬಂದರೆ ಹೆಚ್ಚು ಎಂದು ಹೇಳುತ್ತಾರೆ.

ಇನ್ನು ಸ್ವಾಮೀಜಿಗಳ ಕಾಂಗ್ರೆಸ್‌ಗೆ ಬೆಂಬಲ ನೀಡೋದಾಗಿ ಹೇಳಿದ್ದಾರೆ ಎಂದು ಇಬ್ಬರೂ ನಾಯಕರು ಮಾತನಾಡಿದ್ದಾರೆ. ಜೊತೆ ಸಂತೋಷ್‌ ಅವರು ಹೇಳಿದಾರೆ ಎನ್ನಲಾದ ನಮಗೆ ಲಿಂಗಾಯತರು ಬೇಡ, ಹಿಂದೂಗಳು ಸಾಕು ಎಂಬ ಹೇಳಿಕೆಯ ಬಗ್ಗೆಯೂ ಚರ್ಚೆ ನಡೆದಿದೆ. ಎರಡೂ ವಿಡಿಯೋಗಳನ್ನು ಒಟ್ಟಿಗೆ ಸೇರಿಸಿ ಇಲ್ಲಿ ನೀಡಿದೇವೆ ನೋಡಿ.

Share Post