BengaluruPolitics

ಇಂದೇ ಐದು ಭರವಸೆಗಳೂ ಜಾರಿ; ನೂತನ ಸಿಎಂ ಸಿದ್ದರಾಮಯ್ಯ

ಬೆಂಗಳೂರು; ನಾವು ಚುನಾವಣೆಯ ಸಮಯದಲ್ಲಿ ಐದು ಪ್ರಮುಖ ಗ್ಯಾರೆಂಟಿಗಳನ್ನು ನೀಡಿದ್ದೆವು. ಅವುಗಳನ್ನು ಇಂದೇ ಜಾರಿ ಮಾಡುತ್ತೇವೆ ಎಂದು ನೂತನ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರಮಾಣವಚನ ಸಮಾರಂಭದಲ್ಲಿ ವಂದನಾರ್ಪಣೆ ಮಾಡುತ್ತಾ ಮಾತನಾಡಿದ ಸಿದ್ದರಾಮಯ್ಯ ಅವರು, ಇಂದು ಸಂಜೆಯೇ ಕ್ಯಾಬಿನೆಟ್‌ ಮೀಟಿಂಗ್‌ ನಡೆಯಲಿದೆ. ಈಗಾಗಲೇ ಹೇಳಿದಂತೆ, ಮೊದಲ ಕ್ಯಾಬಿನೆಟ್‌ ಸಭೆಯಲ್ಲಿ ಐದು ಗ್ಯಾರೆಂಟಿಗಳನ್ನು ಜಾರಿ ಮಾಡುತ್ತೇವೆ ಎಂದು ಹೇಳಿದ್ದೆವು. ಅದನ್ನು ನಡೆದುಕೊಳ್ಳುತ್ತೇವೆ. ಇಂದು ನಡೆಯುವ ಕ್ಯಾಬಿನೆಟ್‌ ಸಭೆಯಲ್ಲಿ ಐದೂ ಗ್ಯಾರೆಂಟಿಗಳಿಗೆ ಒಪ್ಪಿಗೆ ಪಡೆಯಲಾಗುತ್ತದೆ ಎಂದು ಹೇಳಿದರು.

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಐದು ಗ್ಯಾರೆಂಟಿಗಳು ಜೊತೆ ಹಲವು ಭರವಸೆಗಳನ್ನು ನೋಡಿದ್ದೇವೆ. ಅವೆಲ್ಲವನ್ನೂ ಹಂತಹಂತವಾಗಿ ಜಾರಿಗೆ ತರುತ್ತೇವೆ. ಈ ಹಿಂದೆ ಕೂಡಾ ನಾವು ನುಡಿದಂತೆ ನಡೆದಿದ್ದೇವೆ. ಈಗಲೂ ನಡೆಯುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

 

Share Post