BengaluruPolitics

ಜೆಡಿಎಸ್‌ ಕಚೇರಿ ಗೋಡೆ ಮೇಲೆ ʻವಿದ್ಯುತ್‌ ಕಳ್ಳ ಕುಮಾರಸ್ವಾಮಿʼ ಎಂಬ ಪೋಸ್ಟರ್‌

ಬೆಂಗಳೂರು; ದೀಪಾವಳಿ ಹಬ್ಬದ ದಿನ ಮಾಜಿ ಸಿಎಂ ಕುಮಾರಸ್ವಾಮಿ ನಿವಾಸಕ್ಕೆ ವಿದ್ಯುತ್‌ ದೀಪಾಲಂಕಾರ ಮಾಡಿದ್ದು, ಅದಕ್ಕೆ ವಿದ್ಯುತ್‌ನ್ನು ನೇರವಾಗಿ ಕಂಬದಿಂದ ತೆಗೆದುಕೊಂಡು ವಿದ್ಯುತ್‌ ಕದಿಯಲಾಗಿದೆ ಎಂದು ಕಾಂಗ್ರೆಸ್‌ ಆರೋಪ ಮಾಡಿತ್ತು. ಇದಾದ ಮೇಲೆ ನಮ್ಮ ಮನೆಯ ಕೆಲಸಗಾರರು ಅಚಾತುರ್ಯ ಮಾಡಿದ್ದಾರೆ. ದಂಡ ವಿಧಿಸಿದರೆ ಅದನ್ನು ಕಟ್ಟುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರು. ಹೀಗಿದ್ದರೂ, ಕಾಂಗ್ರೆಸ್‌ ಕಾರ್ಯಕರ್ತರು ವಿದ್ಯುತ್‌ ಕಳ್ಳ ಎಂಬ ಪೋಸ್ಟರ್‌ ರೆಡಿ ಮಾಡಿ, ಜೆಡಿಎಸ್‌ ಕಚೇರಿಯ ಕಾಂಪೌಂಡ್‌ ಗೋಡೆಗೆ ಅಂಟಿಸಿದ್ದಾರೆ.

ಕಳೆದ ರಾತ್ರಿ ಈ ಪೋಸ್ಟರ್‌ ಅಂಟಿಸಲಾಗಿತ್ತು. ಇದನ್ನು ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ತೆರಳಿ ಪೋಸ್ಟರ್‌ ಅನ್ನು ತೆರವು ಮಾಡಿದ್ದಾರೆ.

Share Post