BengaluruPolitics

ಡಿಕೆಶಿ ಸ್ವಾಗತಿಸಲು ಲಕ್ಷ್ಮೀ ಹೆಬ್ಬಾಳ್ಕರ್‌ ಹೋಗದಿರುವುದು ಎಂಟನೇ ಅದ್ಭುತ; ಮುನಿರತ್ನ

ಬೆಂಗಳೂರು; ನಿನ್ನೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಬೆಳಗಾವಿಗೆ ಹೋದಾಗ ಕಾಂಗ್ರೆಸ್‌ ಶಾಸಕರು, ಸಚಿವರು ಯಾರೂ ಸ್ವಾಗತಿಸಲು ಬಂದಿರಲಿಲ್ಲ. ಈ ವಿಚಾರವಾಗಿ ಮಾಜಿ ಸಚಿವ ಹಾಗೂ ಶಾಸಕ ಮುನಿರತ್ನ ಪ್ರತಿಕ್ರಿಯೆ ನೀಡಿದ್ದಾರೆ. ಸತೀಶ್‌ ಜಾರಕಿಹೊಳಿ ಹೋಗದೇ ಇರುವುದರಲ್ಲಿ ಯಾವುದೇ ವಿಶೇಷತೆ ಇಲ್ಲ. ಆದ್ರೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಡಿಕೆಶಿ ಸ್ವಾಗತ ಮಾಡಲು ಹೋಗದಿರುವುದು ಎಂಟನೇ ಅದ್ಭುತ ಎಂದಿದ್ದಾರೆ. 

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಬಣರಾಜಕೀಯ ಶುರುವಾದಗಲೆಲ್ಲಾ ಸರ್ಕಾರಗಳಿಗೆ ಸಂಕಷ್ಟ ಎದುರಾಗಿದೆ. ಬೆಳಗಾವಿಯ ರಾಜಕಾರಣದಿಂದಲೇ ಸಮ್ಮಿಶ್ರ ಸರ್ಕಾರ ಉರುಳಿದ್ದು, ಪ್ರತಿ ಬಾರಿ ಅಲ್ಲಿ ರಾಜಕಾರಣ ಶುರುವಾದರೆ ಅದು ಬಂದು ಬೆಂಗಳೂರಿನಲ್ಲಿ ಕೊನೆಗೊಳ್ಳುತ್ತದೆ. ಈಗಲೂ ಅದೇ ಆಗುವ ಸಾಧ್ಯತೆ ಇದೆ ಎಂದರು.

 

Share Post