Bengaluru

ವರುಣ್‌ ಸಿಂಗ್‌ ಅವರಿಗೆ ಕಮಾಂಡೊ ಆಸ್ಪತ್ರೆಯಲ್ಲಿ ಚಿಕಿತ್ಸೆ

ಬೆಂಗಳೂರು: ಹೆಲಿಕಾಪ್ಟರ್‌ ದುರಂತದಲ್ಲಿ ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿರುವ ವರುಣ್‌ ಸಿಂಗ್‌ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರಲಾಗಿದೆ. ಕಮಾಂಡು ಆಸ್ಪತ್ರೆಯಲ್ಲಿ ಪೈಲಟ್ ವರುಣ್‌ ಸಿಂಗ್‌ಗೆ ಚಿಕಿತ್ಸೆ ನೀಡಲಾಗ್ತಿದೆ.‌ ಸೂಲೂರು ವಾಯುನೆಲೆಯಿಂದ ಹೆಚ್‌ಎಎಲ್‌ಗೆ ಏರ್‌ ಆಂಬುಲೆನ್ಸ್‌ನಲ್ಲಿ ವರುಣ್‌ ಸಿಂಗ್‌ ಅವರನ್ನು ಕರೆತರಲಾಯಿತು. ಅಲ್ಲಿಂದ ಹಲಸೂರಿನವರೆಗೂ ಝೀರೋ ಟ್ರಾಫಿಕ್‌ ಮೂಲಕ ವರುಣ್‌ ಸಿಂಗ್‌ ಅವರನ್ನು ಆಸ್ಪತೆಗೆ ಶಿಫ್ಟ್‌ ಮಾಡಲಾಗಿದೆ. ಕಮಾಂಡೊ ಆಸ್ಪತೆಯಲ್ಲಿ ನುರಿತ ವೈದ್ಯರಿಂದ ವರುಣ್‌ ಸಿಂಗ್‌ ಅವರಿಗೆ ಚಿಕಿತ್ಸೆ ನೀಡಲಾಗ್ತಿದೆ.

Share Post