BengaluruPolitics

ಕಾಂಗ್ರೆಸ್‌ನವರು ರಾಜ್ಯದ ಜನರನ್ನು ಯಾಮಾರಿಸಿದ್ದಾರೆ; ಮಾಜಿ ಸಿಎಂ ಬೊಮ್ಮಾಯಿ

ಬೆಂಗಳೂರು; ಕಾಂಗ್ರೆಸ್‌ನವರು ಪ್ರಣಾಳಿಕೆಯಲ್ಲಿ ಪ್ರತಿ ಮನೆಗೆ 200 ಯೂನಿಟ್‌ ವಿದ್ಯುತ್‌ ಫ್ರೀ ಎಂದು ಹೇಳಿದ್ದರು. ಆದ್ರೀಗ ಬಳಕೆಯಾಗುತ್ತಿದ್ದಕ್ಕೆ ಹತ್ತು ಪರ್ಸೆಂಟ್‌ ಹೆಚ್ಚು ಸೇರಿ ಫ್ರೀ ಎನ್ನುತ್ತಿದ್ದಾರೆ. 200 ಯೂನಿಟ್‌ ಅನ್ನೋದಕ್ಕೂ ಹತ್ತು ಪರ್ಸೆಂಟ್‌ ಅನ್ನೋದಕ್ಕೂ ವ್ಯತ್ಯಾಸವಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಕಾಂಗ್ರೆಸ್‌ ರಾಜ್ಯದ ಜನರನ್ನು ಯಾಮಾರಿಸಿದೆ ಎಂದು ಹೇಳಿದ್ದಾರೆ.

200 ಯೂನಿಟ್ ಫ್ರೀಂ ಸ್ಕೀಂನಲ್ಲಿ ಜನರಿಗೆ ದೋಖಾ ಆಗಿದೆ. ಅನ್ನಭಾಗ್ಯದಲ್ಲೂ ಮೋಸ ಆಗುವ ಸಾಧ್ಯತೆ ಇದೆ. 10 ಕೆಜಿಯಲ್ಲಿ ರಾಗಿ, ಜೋಳ ಸೇರಿದ್ಯಾ? ಅಥವಾ ಬರೀ 10 ಕೆಜಿ ಅಕ್ಕಿಯೇ ಕೊಡ್ತೀರಾ..? ಇದನ್ನು ಸ್ಪಷ್ಟಪಡಿಸಿ ಎಂದು ಬೊಮ್ಮಾಯಿ ಒತ್ತಾಯ ಮಾಡಿದ್ದಾರೆ.

Share Post