BengaluruPolitics

ಕಾಂಗ್ರೆಸ್‌, ಬಿಜೆಪಿಗೆ ತಳಮಳ ಶುರುವಾಗಿದೆ; ಕುಮಾರಸ್ವಾಮಿ

ಬೆಂಗಳೂರು; ಜೆಡಿಎಸ್‌ಗೆ ಜನ ಬೆಂಬಲ ಸಿಗುತ್ತಿರುವುದು ನೋಡಿ ಬಿಜೆಪಿ ಹಾಗೂ ಕಾಂಗ್ರೆಸ್‌ ಎರಡೂ ಪಕ್ಷಗಳಿಗೆ ತಳಮಳ ಶುರುವಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳ ಜನರನ್ನು ಕರೆತರಲು ಹಣ ಕೊಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ಎಪ್ಪತ್ತು ಸ್ಥಾನಗಳ ಮೇಲೆ ಬರೋದಿಲ್ಲ ಎಂದು ಎಲ್ಲಾ ಮಾತಾಡಿಕೊಳ್ಳುತ್ತಿದ್ದಾರೆ. 123 ಸೀಟು ನಮ್ಮ ಟಾರ್ಗೆಟ್‌. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ನಮಗೆ ಎಲ್ಲಾ ಕಡೆ ಉತ್ತಮ ಜನ ಬೆಂಬಲ ಸಿಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Share Post