Bengaluru

ವಿಮಾನ ತಾಂತ್ರಿಕ ದೋಷ ಸಿಎಂ ಹುಬ್ಬಳ್ಳಿ ಪ್ರಯಾಣ ತಡ

ಬೆಂಗಳೂರು: ಹುಬ್ಬಳ್ಳಿಯ ಖಾಸಗಿ ಹೊಟೇಲ್‌ನಲ್ಲಿ ಇಂದು ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದೆ. ಆದ್ರೆ ಬೊಮ್ಮಾಯಿಯವರು ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅವರ ಹುಬ್ಬಳ್ಳಿ ಪ್ರಯಾಣ ತಡವಾಗಲಿದೆ. ಈಗಾಗಲೇ ಸಿಎಂ ಹೆಚ್‌ಎಲ್‌ ವಿಮಾನ ನಿಲ್ದಾಣಕ್ಕೆ ಬಂದು ಕಾದು ಕುಳಿತಿದ್ದಾರೆ. ಬೊಮ್ಮಾಯಿಯವರು ಪ್ರಯಾಣಿಸಬೇಕಾದ ವಿಮಾನದ ಬ್ಯಾಟರಿಯಲ್ಲಿ ಸಮಸ್ಯೆ ಕಂಡುಬಂದಿದೆ. ಬೆಳಗ್ಗೆ 8.45ಕ್ಕೆ ಹೊರಡಬೇಕಿದ್ದ ವಿಮಾನ ಇನ್ನೂ ಟೇಕಾಫ್‌ ಆಗಿಲ್ಲ. 9.45ಕ್ಕೆ ಹುಬ್ಬಳ್ಳಿಗೆ ಬಂದಿಳಿಯಬೇಕಿತ್ತು. ಸಿಎಂ ತೆರಳದ ಹಿನ್ನೆಲೆ ಕಾರ್ಯಕಾರಿಣಿ ಸಭೆಯ ಕಾರ್ಯಕ್ರಮದ ಉದ್ಘಾಟನೆ ಮಧ್ಯಾಹ್ನ ಮೂರು ಗಂಟೆಗೆ ನಡೆಯಲಿದೆ. ಸಿಎಂ ಬೊಮ್ಮಾಯಿಯವರಿಗೆ ಕಂದಾಐ ಸಚಿವ ಆರ್.ಅಶೋಕ್ ಸಾಥ್‌ ನೀಡಲಿದ್ದಾರೆ.

Share Post