BengaluruHealth

ಸಿದ್ದರಾಮಯ್ಯ ಎಡಗೈಗೆ ಊತ; ವೈದ್ಯರಿಂದ ಚಿಕಿತ್ಸೆ

ಬೆಂಗಳೂರು; ಮಾಜಿ ಸಿಎಂ ಸಿದ್ದರಾಮಯ್ಯ ಅವರು ಚುನಾವಣೆಯಲ್ಲಿ ಸತತ ಸುತ್ತಾಟ ನಡೆಸಿದ್ದರಿಂದ ಅವರ ಎಡಗೈನಲ್ಲೀ ಊತ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ನಿವಾಸಕ್ಕೆ ವೈದ್ಯರನ್ನು ಕರೆಸಿಕೊಂಡು ಚಿಕಿತ್ಸೆ ಪಡೆದಿದ್ದಾರೆ.

ಮತದಾನಕ್ಕೂ ಎರಡು ದಿನ ಮುಂಚೆ ಕಾಂಗ್ರೆಸ್‌ ವಿಡಿಯೋ ಒಂದು ರಿಲೀಸ್‌ ಮಾಡಿತ್ತು. ಅದರಲ್ಲಿ ಡಿ.ಕೆ.ಶಿವಕುಮಾರ್‌ ಅವರು, ಹೇಗಿದೆ ಆರೋಗ್ಯ ಎಂದು ಸಿದ್ದರಾಮಯ್ಯ ಅವರನ್ನು ಕೇಳಿದ್ದರು. ಆಗ ಸಿದ್ದರಾಮಯ್ಯ ಎಡಗೈ ತೋರಿಸಿ ಇದು ನೋಯುತ್ತಿದೆ ಎಂದು ಹೇಳಿದ್ದರು.

ಇದೀಗ ಆ ಕೈ ನೋಯುತ್ತಿದ್ದು, ಊತ ಕಂಡುಬಂದಿದೆ. ಹೀಗಾಗಿ, ವೈದ್ಯರಿಂದ ಚಿಕಿತ್ಸೆ ಪಡೆದಿದ್ದಾರೆ. ನಾಳೆ ಫಲಿತಾಂಶ ಹಿನ್ನೆಯಲ್ಲಿ ಸಿದ್ದರಾಮಯ್ಯ ಇಂದು ಮೈಸೂರಿಗೆ ತೆರಲಿದ್ದಾರೆ ಎಂದು ತಿಳಿದುಬಂದಿದೆ.

 

Share Post