Bengaluru

40%ಕಮಿಷನ್‌ ಆರೋಪಕ್ಕೆ ನಿಲುವಳಿ ಸೂಚನೆ ತಿರಸ್ಕಾರ: ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಬೇಸರ

ಬೆಂಗಳೂರು: ಗುತ್ತಿಗೆದಾರರ ಸಂಘದಿಂದ 40ಪರ್ಸೆಂಟ್‌ ಕಮಿಷನ್‌ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಕಲಾಪದಲ್ಲಿ ಸಿದ್ದರಾಮಯ್ಯ ನೀಡಿದ್ದ ನಿಲುವಳಿ ಸೂಚನೆಯನ್ನು ಮತ್ತೊಮ್ಮೆ ತಿರಸ್ಕಾರ ಮಾಡಲಾಗಿದೆ. ಕಲಾಪದಲ್ಲಿ ಸಿದ್ದರಾಮಯ್ಯರ ನಿಲುವಳಿ ಸೂಚನೆ ತಿರಸ್ಕರಿಸಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿಯವರು ರೂಲಿಂಗ್‌ ನೀಡಿದ್ರು. ಇದಕ್ಕೆ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ರು.

ನಿಲುವಳಿ ಸೂಚನೆಯನ್ನು ಮತ್ತೊಮ್ಮೆ ತಿರಸ್ಕಾರ ಮಾಡಿದ್ದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಬೇಸರ ಹೊರಹಾಕಿದ್ದಾರೆ. ನೀವೆಲ್ಲಾ ಸೇರಿ ತೀರ್ಮಾನ ಮಾಡಿದಂತಿದೆ. ಅದಕ್ಕೆ ಚರ್ಚೆಗೆ ಅವಕಾಶ ನೀಡುತ್ತಿಲ್ಲವೆಂದು ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಬೇಸರ ವ್ಯಕ್ತಪಡಿಸಿದ್ರು.

Share Post