BengaluruCrime

ಮಾತ್ರೆ, ಒಳ ಉಡುಪಲ್ಲಿ ಚಿನ್ನ ಸಾಗಾಟ; ಐವರ ಬಂಧನ

ಬೆಂಗಳೂರು; ತೆರಿಗೆ ವಂಚನೆ ಮಾಡೋದಕ್ಕಾಗಿ ಯಾವ್ಯಾವುದೋ ರೂಪದಲ್ಲಿ ಚಿನ್ನವನ್ನು ಬೇರೆ ದೇಶಗಳಿಂದ ತರುತ್ತಿದ್ದಾರೆ. ಏನೂ ಮಾಡಿದರೂ ಒಂದಿಲ್ಲೊಂದು ದಿನ ಸಿಕ್ಕಿಬೀಳೋದೇ. ಈ ಬಾರಿ ಐವರು ಮಾತ್ರೆ ಹಾಗೂ ಒಳ ಉಡುಪಿನಲ್ಲಿ ಚಿನ್ನಭಾರಣ ಕಳ್ಳಸಾಗಣೆ ಮಾಡುತ್ತಿದ್ದರು. ಆದ್ರೆ ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ಅವರನ್ನು ಹಿಡಿದಿದ್ದಾರೆ.

ಬಂಧಿತರಿಂದ 3.9 ಕೋಟಿ ರೂ. ಮೌಲ್ಯದ 5.135 ಕೆಜಿ ಚಿನ್ನವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಎರಡು ದಿನದಲ್ಲಿ ಕುವೈತ್, ದುಬೈ, ಶಾರ್ಜಾ, ಮತ್ತು ಬ್ಯಾಂಕಾಕ್‍ನಿಂದ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.

Share Post