Bengaluru

ವಿಧಾನಸಸೌಧಕ್ಕೂ ನುಗ್ಗಿದ ಮಳೆ ನೀರು; ಕ್ಯಾಂಟೀನ್‌ನಲ್ಲಿ ನೀರೋನೀರು

ಬೆಂಗಳೂರು; ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ವಿಧಾನಸೌಧಕ್ಕೂ ನೀರು ನುಗ್ಗಿದೆ.  ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ಸಮೀಪದ ನೆಲ ಮಹಡಿಯಲ್ಲಿನ ಕ್ಯಾಂಟೀನ್ ಒಳಗೆ ಮಳೆ ನೀರು ನುಗ್ಗಿದ್ದು, ಕ್ಯಾಂಟೀನ್ ಸಿಬ್ಬಂದಿ ಬೆಳಗ್ಗೆ ಬಂದು ನೋಡಿದಾಗ ಇಡೀ ಕ್ಯಾಂಟೀನ್​ನಲ್ಲಿ ನೀರು ತುಂಬಿರುವುದು ಕಂಡು ಬಂದಿದೆ.

ಮಳೆ ನೀರಿಗೆ ಕುರ್ಚಿ, ಕ್ಯಾಂಟೀನ್​ನ​ ಆಹಾರ ತಯಾರಿಸುವ ಉಪಕರಣಗಳು ಒದ್ದೆಯಾಗಿದ್ದವು. ಬಳಿಕ ಅಲ್ಲಿನ ಸಿಬ್ಬಂದಿ ಪಂಪ್​ ಮೂಲಕ ಮಳೆ ನೀರು ಹೊರ ಹಾಕಿದ್ದಾರೆ. ಸಂಪ್​ಗೆ ಮಳೆ ನೀರು ನುಗ್ಗಿದ್ದರಿಂದ ಈ ಅನಾಹುತವಾಗಿದೆ ಎಂದು ಸಿಬ್ಬಂದಿ ಹೇಳಿದರು. ವಿಧಾನಸೌಧ ಆವರಣದಲ್ಲಿರುವ ಪೊಲೀಸ್ ಠಾಣೆಗೂ ನೀರು ನುಗ್ಗಿದ್ದು, ಬಳಿಕ ಪೊಲೀಸ್ ಸಿಬ್ಬಂದಿ ಮಳೆ ನೀರು ಹೊರ ಹಾಕಿದರು.

 

Share Post