BengaluruCrime

ಉದ್ಘಾಟನೆಯಾಗಿ ತಿಂಗಳೂ ಆಗಿಲ್ಲ; ಆಗಲೇ ಕುಸಿದ ರಸ್ತೆ

ಬೆಂಗಳೂರು; ಬೆಂಗಳೂರಿನಲ್ಲಿ ಕಳಪೆ ಕಾಮಗಾರಿಗಳು ಮಾಮೂಲಿ. ರಸ್ತೆ ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಹಾಳಾಗೋದು ಇಲ್ಲಿ ಸರ್ವೇ ಸಾಮಾನ್ಯ. ಇದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಮಹದೇವಪುರ ಕ್ಷೇತ್ರದ ಮಾರತ್ತಹಳ್ಳಿ ಬಳಿಯ ಕುಂದಲಹಳ್ಳಿ ಜಂಕ್ಷನ್ ನಲ್ಲಿ ರಸ್ತೆ ಕುಸಿದಿದೆ. ರಸ್ತೆ ಉದ್ಘಾಟನೆಯಾಗಿ ಇನ್ನೂ ತಿಂಗಳಾಗಿಲ್ಲ, ಆಗಲೇ ರಸ್ತೆಯಲ್ಲಿ ದೊಡ್ಡ ಗುಂಡಿಬಿದ್ದಿದೆ. ಇದು ಕಳಪೆ ಕಾಮಗಾರಿ ಸಾಕ್ಷಿ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.

   ತಿಂಗಳ ಹಿಂದೆ ಇಲ್ಲಿ ಅಂಡರ್ ಪಾಸ್ ಉದ್ಘಾಟಿಸಿಲಾಗಿತ್ತು. 2019 ರಲ್ಲಿ 25 ಕೋಟಿ ವೆಚ್ಚದಲ್ಲಿ ಈ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಕಾಮಗಾರಿ ಪೂರ್ಣಗೊಂಡ ಬಳಿಕ ಇತ್ತೀಚೆಗಷ್ಟೇ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಭಾನುವಾರ ರಸ್ತೆ ಕುಸಿದಿದ್ದು, ಗುಂಡಿ ಏರ್ಪಟ್ಟಿದೆ. ಇದರಿಂದಾಗಿ ವಾಹನ ಓಡಾಟಕ್ಕೆ ಅಡಚಣೆಯಾಗಿದೆ.

Share Post