BengaluruPolitics

ಗುತ್ತಿಗೆದಾರರು ಯೂಟರ್ನ್‌ ಹೊಡೆದಿದ್ದಕ್ಕೆ ಸಂಧಾನ ಕಾರಣ; ಹೆಚ್ಡಿಕೆ

ಬೆಂಗಳೂರು; ಬಿಲ್‌ ಪಾವತಿಗೆ ಹದಿನೈದು ಪರ್ಸೆಂಟ್‌ ಕಮೀಷನ್‌ ಕೇಳುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ವಿರುದ್ಧ ಬಿಬಿಎಂಪಿ ಗುತ್ತಿಗೆದಾರರು ಆರೋಪ ಮಾಡಿದ್ದರು. ಅನಂತರ ಅವರು ಯೂಟರ್ನ್‌ ಹೊಡೆದಿದ್ದರು. ಇದಕ್ಕೆ ರಾತ್ರೋರಾತ್ರಿ ಸಂಧಾನವೇ ಕಾರಣ ಎಂದು ಮಾಜಿ ಸಿಎಂ ಹೆಚ್‌.ಡಿ.ಕುಮಾರ ಸ್ವಾಮಿ ಹೊಸ ಬಾಂಬ್‌ ಸಿಡಿಸಿದ್ದಾರೆ.

ಮಾಜಿ ಶಾಸಕರೊಬ್ಬರ ಮಧ್ಯಸ್ಥಿಕೆಯಲ್ಲಿ ರಾತ್ರೋರಾತ್ರಿ ಸಂಧಾನದ ನಡೆದಿದೆ. ಅನಂತರ ಗುತ್ತಿಗೆದಾರ ಪ್ರೆಸ್‌ಮೀಟ್‌ ಕರೆದು ಡಿ.ಕೆ.ಶಿವಕುಮಾರ್‌ ಅವರು ನಮ್ಮ ಬಳಿ ಕಮೀಷನ್‌ ಕೇಳಿಲ್ಲ ಎಂದು ಹೇಳಿದ್ದಾರೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

ಆದ್ರೆ ಸಂಧಾನ ಮಾಡಿದ ಆ ಮಾಜಿ ಶಾಸಕ ಯಾರು ಎಂಬುದನ್ನು ಬಹಿರಂಗ ಮಾಡಿಲ್ಲ. ಅವರು ಯಾರು..? ಅವರ ಡಿಕೆಶಿ ಆಪ್ತರಾ..? ಎಂಬುದರ ಬಗ್ಗೆ ಕುತೂಹಲ ಶುರುವಾಗಿದೆ.

 

Share Post