Bengaluru

ಬೆಂಗಳೂರಿನಲ್ಲಿ ಅಮಾನುಷ ಘಟನೆ; ತಂದೆಯಿಂದ ಮಗನಿಗೆ ಬೆಂಕಿ ಹಚ್ಚಿ ಕೊಲೆ

ಬೆಂಗಳೂರು: ಹಾಡಹಗಲೇ ಬೆಂಗಳೂರಿನ ಆಜಾದ್‌ ನಗರದಲ್ಲಿ ಭಯಾನಕ ಹತ್ಯೆಯೊಂದು ನಡೆದಿದೆ. ಸ್ವಂತ ತಂದೆ ತನ್ನ ಮಗನಿಗೆ ನಡುರಸ್ತೆಯಲ್ಲಿ ಬೆಂಕಿ ಹಚ್ಚಿ ಹತ್ಯೆಗೈದಿದ್ದಾರೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಆಜಾದ್‌ನಗರದ ಮುಖ್ಯರಸ್ತೆಯಲ್ಲಿ ಈ ಕೃತ್ಯ ಎಸಗಲಾಗಿದೆ. ವ್ಯವಹಾರದ ಹಣದಲ್ಲಿ ವ್ಯತ್ಯಾಸ ಬಂದ ಹಿನ್ನೆಲೆಯಲ್ಲಿ ಕಾರಣಕ್ಕೆ ತಂದೆ ರೊಚ್ಚಿಗೆದ್ದಿದ್ದಾರೆ. ಮನೆಯ ಮುಂದೆ ನಡುರಸ್ತೆಯಲ್ಲೇ ಮಗನಿಗೆ ಬೆಂಕಿ ಹಚ್ಚಿದ್ದಾರೆ. ಮಗ ಬೇಡವೆಂದು ಗೋಗರೆಯುತ್ತಿದ್ದರೂ ಕೇಳದ ತಂದೆ ಅಮಾನುಷವಾಗಿ ವರ್ತಿಸಿದ್ದಾರೆ.  ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಲಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದ ಮಗ ಅರ್ಪಿತ್‌ನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಆತನ ಸಾವನ್ನಪ್ಪಿದ್ದಾನೆ.

ಮಗನಿಗೆ ಬೆಂಕಿ ಇಟ್ಟ ಸುರೇಂದ್ರ ಅವರು ಬಡ್ಡಿ ವ್ಯವಹಾರ ಮಾಡಿಕೊಂಡಿದ್ದರು. ಜೊತೆಗೆ ಬಿಲ್ಡಿಂಗ್ ಫ್ಯಾಬ್ರಿಕೇಷನ್ ಬ್ಯುಸಿನೆಸ್ ನಡೆಸುತ್ತಿದ್ದರು. ಆರೋಪಿ ಸುರೇಂದ್ರಗೆ ಇಬ್ಬರು ಮಕ್ಕಳಿದ್ದು, ಮೃತ ಅರ್ಪಿತ್ ಹಿರಿಯ ಮಗನೆಂದು ಗೊತ್ತಾಗಿದೆ. ಮತ್ತೊಬ್ಬಳು ಸಹೋದರಿ.  ಸಿಎ ಅಪೂರ್ಣ ಮಾಡಿದ್ದ ಮಗನಿಗೆ ಬ್ಯುಸಿನೆಸ್ ಜವಾಬ್ದಾರಿ ವಹಿಸಿದ್ರೆ 1.5 ಕೋಟಿಯಷ್ಟು ಲೆಕ್ಕದಲ್ಲಿ ವ್ಯತ್ಯಾಸವಾಗಿತ್ತು. ಇದೇ ವಿಚಾರವಾಗಿ ಅಪ್ಪ ಮಗನ ಮಧ್ಯೆ ಗಲಾಟೆಗಳಾಗಿತ್ತು. ರೊಚ್ಚಿಗೆದ್ದು ಥಿನ್ನರ್ ಸುರಿದು ಬೆಂಕಿ ಹಚ್ಚಿದ್ದ ಎನ್ನಲಾಗಿದೆ.

Share Post