BengaluruCrime

ಲಿವ್‌ ಇನ್ ರಿಲೇಶಿಪ್‌ನಲ್ಲಿ ಬಿರುಕು; ಪ್ರಿಯತಮೆಯನ್ನು ಕೊಲೆಗೈದ ಪಾಪಿ

ಬೆಂಗಳೂರು; ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಜೋಡಿಯ ನಡುವೆ ಬಿರುಕುಂಟಾಗಿದ್ದು, ಜೊತೆಗಿದ್ದ ಯುವತಿಯನ್ನು ಹಯುವಕ ಕೊಲೆ ಮಾಡಿದ್ದಾರೆ. ರಾಮಮೂರ್ತಿ ನಗರದ ಟಿ.ಸಿ.ಪಾಳ್ಯದಲ್ಲಿ ಈ ಕೃತ್ಯ ಎಸಗಲಾಗಿದೆ.

ಹೊರಮಾವಿನ ಯೂನಿಸೆಕ್ಸ್‌ ಸ್ಪಾದಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣಕುಮಾರಿ ಎಂಬಾಕೆಯೇ ಕೊಲೆಯಾದವಳು. ಈಕೆ ನೇಪಾಳ ಮೂಲದವಳು ಎಂದು ತಿಳಿದುಬಂದಿದೆ. ನೇಪಾಳದವನೇ ಆದ ಸಂತೋಷ್‌ ದಾಮಿ ಕೊಲೆ ಮಾಡಿದ ಆರೋಪಿ. ಸಂತೋಷ್‌ ದಾಮಿ ಟಿ.ಸಿ.ಪಾಳ್ಯದಲ್ಲಿ ಬಾರ್ಬರ್‌ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರೂ ಒಂದೇ ರಾಜ್ಯದವರಾಗಿದ್ದರಿಂದ ಪರಿಚಯವಾಗಿತ್ತು. ಅದು ಪ್ರೀತಿಗೆ ತಿರುಗಿ ಇಬ್ಬರೂ ಒಟ್ಟಿಗೆ ವಾಸಿಸಲಾರಂಭಿಸಿದ್ದರು.

ಟಿಸಿ ಪಾಳ್ಯದಲ್ಲಿ ಬಾಡಿಗೆ ರೂಂ ಪಡೆದು ಇಬ್ಬರೂ ವಾಸಿಸುತ್ತಿದ್ದರು. ಇಂದು ಬೆಳಗ್ಗೆ ಇಬ್ಬರ ನಡುವೆ ಜೋರು ಜಗಳ ನಡೆದಿದೆ. ಈ ವೇಳೆ ಆಕ್ರೋಶಗೊಂಡಿದ್ದ ಸಂತೋಷ್‌ ದಾಮಿ, ಕೃಷಕುಮಾರಿಯನ್ನು ಕೊಲೆ ಮಾಡಿದ್ದಾನೆ. ಘಟನೆ ಸಂಬಂಧ ರಾಮಮೂರ್ತಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Share Post