BengaluruPolitics

ಅಯೋಧ್ಯೆ ವಿಚಾರದ ಕೇಸ್‌ಗಳು ಸರ್ಕಾರ ವಾಪಸ್‌ ಪಡೆಯಲಿ; ಜಗದೀಶ್‌ ಶೆಟ್ಟರ್‌

ಬೆಂಗಳೂರು; ಆಯೋಧ್ಯೆ ವಿಚಾರವಾಗಿ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಸರ್ಕಾರ ಹಿಂಪಡೆಯಬೇಕು ಎಂದು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ವಿಚಾರದಲ್ಲಿ ರಾಜಕೀಯ ಮಾಡಬೇಕಾದ ಅವಶ್ಯಕತೆ ಇಲ್ಲ. ಸರ್ಕಾರ ಕೂಡಲೇ ಪ್ರಕರಣವನ್ನು ಹಿಂಪಡೆಯಬೇಕು ಎಂದಿದ್ದಾರೆ.

ಸರ್ಕಾರ ಬಂಧನ ಮಾಡಿ ಎಂದು ಯಾವ ಕಾರಣಕ್ಕೂ ಹೇಳಿರುವುದಿಲ್ಲ. ಕೋರ್ಟ್‌ ಆದೇಶ ಬಂದಿದ್ದರಿಂದ ಪೊಲೀಸರೇ ಬಂಧನದ ನಿರ್ಧಾರ ಮಾಡಿರಬಹುದು. ಸರ್ಕಾರ ಹೇಳಿ ಬಂದನ ಮಾಡಿಸಿದೆ ಎಂದರೆ ನಾನು ಅದನ್ನು ಒಪ್ಪುವುದಿಲ್ಲ. ಬಿಜೆಪಿ ಪ್ರತಿಭಟನೆ ಮಾಡಿದರೆ ಮಾಡಲಿ ಬಿಡಿ. ಈ ಹಿಂದೆ ಬಿಜೆಪಿಯದ್ದೇ ಸರ್ಕಾರವಿತ್ತು. ಆಗಲೇ ಈ ಪ್ರಕರಣ ರದ್ದು ಮಾಡಿದ್ದರೆ ಮುಗಿದೇ ಹೋಗುತ್ತಿತ್ತಲ್ಲ ಎಂದು ಶೆಟ್ಟರ್‌ ಹೇಳಿದ್ದಾರೆ.

ಅಯೋಧ್ಯೆ ವಿಚಾರಕ್ಕಾಗಿ ಗಲಭೆ ಆದ್ರೆ ಅವರ ವಿರುದ್ಧ ರೌಡಿಶೀಟ್‌ ಓಪನ್‌ ಮಾಡ್ತಾ ಇದ್ದರು. ಹೀಗೆ ರೌಡಿ ಲಿಸ್ಟ್‌ಗೆ ಸೇರಿದವರ ಪೈಕಿ 50-60 ವರ್ಷದವರು ಕೂಡಾ ಇದ್ದಾರೆ. ವಯಸ್ಸಾದವರನ್ನು ರೌಡಿಶೀಟ್‌ನಿಂದ ತೆಗೆಯಿರಿ ಅಂತಾ ನಾನು ಮೊದಲಿನಿಂದಲೂ ಪೊಲೀಸ್‌ ಕಮೀನರ್‌ಗಳಿಗೆ ಹೇಳುತ್ತಾ ಬಂದಿದ್ದೆ ಎಂದು ಶೆಟ್ಟರ್‌ ಜ್ಞಾಪಿಸಿಕೊಂಡರು.

 

Share Post