BengaluruCrime

ಪಾಗಲ್‌ ಪ್ರೇಮಿಯ ಕಾಟಕ್ಕೆ ಆತ್ಮಹತ್ಯೆ ಶರಣಾದಳಾ ದಂತ ವೈದ್ಯೆ..?

ಬೆಂಗಳೂರು; ಬೆಂಗಳೂರಿನಲ್ಲಿ ಪಾಗಲ್ ಪ್ರೇಮಿಯ ಕಾಟಕ್ಕೆ ನೊಂದು ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜಯ್‌ನಗರಲ್ಲಿ ಜನವರಿ 25ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪ್ರಿಯಾಂನ್ಷಿ ತ್ರಿಪಾಠಿ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ವೈದ್ಯೆ. ಉತ್ತರಪ್ರದೇಶ ಲಖನೌ ಮೂಲದ ಪ್ರಿಯಾಂನ್ಷಿ ಬೆಂಗಳೂರಿನಲ್ಲಿ ದಂತವ್ಯೆದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಎಂಎಸ್ ರಾಮಯ್ಯ ಆಸ್ಪತ್ರೆಯ ದಂತವೈದ್ಯೆ ಆಗಿದ್ದ ಪ್ರಿಯಾಂನ್ಷಿ ತ್ರಿಪಾಠಿಗೆ ಎಂಎಸ್ ರಾಮಯ್ಯ ಆಸ್ಪತ್ರೆಯ ವೈದ್ಯ ಸುಮಿತ್ ಎಂಬುವವರು ಪ್ರೇಮ ನಿವೇದನೆ ಮಾಡಿದ್ದರು. ಆದ್ರೆ ಪ್ರಿಯಾಂನ್ಷಿ ಇದಕ್ಕೆ ಒಪ್ಪಿರಲಿಲ್ಲ.

ಆದ್ರೆ ಪಾಗಲ್‌ ಪ್ರೇಮಿಯಾಗಿದ್ದ ಸುಮಿತ್‌, ಪ್ರಿಯಾಂನ್ಷಿಗೆ ಮಾನಸಿಕ ಹಿಂಸೆ ನೀಡಿದ್ದರು ಎಂದು ಆರೋಪಿಸಲಾಗಿದೆ. ಜೊತೆಗೆ ಪ್ರಿಯಾಂನ್ಷಿ ತ್ರಿಪಾಠಿ ನಡತೆ ಬಗ್ಗೆ ಆಸ್ಪತ್ರೆಯಲ್ಲೆಲ್ಲಾ ಸುಳ್ಳು ಮಾಹಿತಿ ಹಬ್ಬಿಸಿದ್ದ ಎಂದು ಹೇಳಲಾಗುತ್ತಿದೆ. ಆಕೆ ಸರಿಯಿಲ್ಲ ಆಕೆಯನ್ನು ಮದ್ವೆ ಆಗಲ್ಲ ಎಂದು ಡಾಕ್ಟರ್ ಸುಮಿತ್ ನಿಂದಿಸಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಮನನೊಂದು ಪ್ರಿಯಾಂನ್ಷಿ ತ್ರಿಪಾಠಿ ಆತ್ಮಹತ್ಯೆ ಮಾಡಿಕೊಂಡಿದ್ದಾರಂತೆ.

ಪ್ರಿಯಾಂನ್ಷಿ ತಂದೆ ಸುಶೀಲ್ ತ್ರಿಪಾಠಿ ದೂರು ಆಧರಿಸಿ ಸಂಜಯ್‌ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

Share Post