Bengaluru

ಸೆ.29ಕ್ಕೆ ಕರ್ನಾಟಕ ಬಂದ್‌ ಸಾಧ್ಯತೆ; ಇಂದು ವಾಟಾಳ್‌ ನೇತೃತ್ವದಲ್ಲಿ ಸಭೆ

ಬೆಂಗಳೂರು; ಒಂದು ಕಡೆ ಕುರುಬೂರು ಶಾಂತಕುಮಾರ್‌ ನೇತೃತ್ವದಲ್ಲಿ ನಾಳೆ ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ. ಆದ್ರೆ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಕರ್ನಾಟಕ ಬಂದ್‌ ನಡೆಸಲು ಸಿದ್ಧತೆ ನಡೆಸಲಾಗಿದೆ. ಇದೇ 29ರಂದು ಕರ್ನಾಟಕ ಬಂದ್‌ ನಡೆಯುವ ಸಾಧ್ಯತೆ ಇದೆ. ಹೀಗಾಗಿ ನಾಳೆಯ ಬೆಂಗಳೂರು ಬಂದ್‌ ಕೈಬಿಟ್ಟು, ಸೆ.29ರ ಬಂದ್‌ಗೆ ಬೆಂಬಲ ಸೂಚಿಸುವಂತೆ ಕುರುಬೂರು ಶಾಂತಕುಮಾರ್‌ ಅವರಿಗೆ ಮನವಿ ಮಾಡಲಾಗಿದೆ. ಇಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ವುಡ್‌ಲ್ಯಾಂಡ್ಸ್‌ ಹೋಟೆಲ್‌ನಲ್ಲಿ ಸಭೆ ನಡೆಯಲಿದೆ. ಈ ಸಭೆಗೆ ಕುರುಬೂರು ಶಾಂತಕುಮಾರ್‌ ಅವರಿಗೂ ಆಹ್ವಾನ ನೀಡಲಾಗಿದೆ. ಹೀಗಾಗಿ ಈ ಸಭೆ ಮಹತ್ವದ್ದೆನಿಸಿದೆ.

ಕುರುಬೂರು ಶಾಂತಕುಮಾರ್‌ ಅವರು ವಾಟಾಳ್‌ ಬಣದ ಮನವಿ ಸ್ವೀಕರಿಸಿದರೆ ನಾಳೆ ಬಂದ್‌ ಇರೋದಿಲ್ಲ. ಒಪ್ಪದೇ ಹೋದರೆ ಒಂದೇ ವಾರದಲ್ಲಿ ಎರಡು ಬಂದ್‌ಗೆ ಜನರು ಸಜ್ಜಾಗಬೇಕಾಗುತ್ತದೆ. ಮೂಲಗಳ ಪ್ರಕಾರ ನಾಳೆ ಬಂದ್‌ ನಡೆಯೋದು ಬಹುತೇಕ ಖಚಿತ.

 

Share Post